HEALTH TIPS

ಆಜಾದಿ ಕಾ ಅಮೃತ್ ಮಹೋತ್ಸವ: ಸಾರ್ವಜನಿಕ ಸಂಪರ್ಕ ಕಾರ್ಯಕ್ರಮ ಆರಂಭ; ವಸ್ತುಪ್ರದರ್ಶನ ಉದ್ಘಾಟಿಸಿದ ಸಚಿವ ಜಿ.ಆರ್. ಅನಿಲ್


             ತಿರುವನಂತಪುರಂ: ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ, ಮಾಹಿತಿ, ಪ್ರಸಾರ ಸಚಿವಾಲಯ ಮತ್ತು ಕೇಂದ್ರ ಸಂವಹನ ಬ್ಯೂರೋ ತಿರುವನಂತಪುರಂ ಪ್ರಾದೇಶಿಕ ಕಚೇರಿ ಆಯೋಜಿಸಿರುವ ಪ್ರದರ್ಶನ ಮತ್ತು ಸಾರ್ವಜನಿಕ ಸಂಪರ್ಕ ಕಾರ್ಯಕ್ರಮವು ಪ್ರಾರಂಭವಾಗಿದೆ.
          ಫೆ.6ರಿಂದ 10ರವರೆಗೆ ನೆಡುಮಂಗಾಡ್ ಪುರಭವನದಲ್ಲಿ ನಡೆಯಲಿರುವ ವಿವಿಧ ಕಾರ್ಯಕ್ರಮಗಳ ಉದ್ಘಾಟನೆಯನ್ನು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಜಿ. ಆರ್.ಅನಿಲ್ ನಿರ್ವಹಿಸಿದರು.
            ಮಕ್ಕಳಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದ ಅರಿವನ್ನು ಹೆಚ್ಚಿಸಲು ಮೇಳ ಸಹಕಾರಿಯಾಗಲಿದೆ ಎಂದು ಸಚಿವರು ಹೇಳಿದರು. ಮೇಳದ ಪ್ರತಿ ಮಳಿಗೆಯೂ ಇತಿಹಾಸದ ಭಾಗವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿರುವ ಕುಟುಂಬಶ್ರೀ ಕಾರ್ಯಕರ್ತರನ್ನು ಸಚಿವರು ಶ್ಲಾಘಿಸಿದರು. ಇಪ್ಪತ್ತು ವರ್ಷಗಳಿಂದ ಕುಟುಂಬಶ್ರೀ ಮಾಡಿರುವ ಪ್ರಗತಿ ದೊಡ್ಡದಾಗಿದೆ ಮತ್ತು ಕುಟುಂಬಶ್ರೀ ವಿಶ್ವಕ್ಕೆ ಕೇರಳದ ದೊಡ್ಡ ಕೊಡುಗೆಯಾಗಿದೆ ಎಂದು ಸಚಿವರು ಹೇಳಿದರು.
           ಐದು ದಿನಗಳ ಮೇಳದಲ್ಲಿ ಕಾರ್ಯಾಗಾರಗಳು, ಸೆಮಿನಾರ್‍ಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ತರಗತಿಗಳು, ಆಜಾದಿ ಕಾ ಅಮೃತ ಮಹೋತ್ಸವ ಪ್ರದರ್ಶನ, ಸ್ಪರ್ಧೆಗಳು, ಕಲೆ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳು, ವಿಎಸ್‍ಎಸ್‍ಸಿ, ಹಿಂದೂಸ್ತಾನ್ ಲ್ಯಾಟೆಕ್ಸ್, ನ್ಯಾಷನಲ್ ಓಪನ್ ಸ್ಕೂಲ್, ಸಿಎಮ್‍ಎಲ್‍ಆರ್‍ಐ ಸೇರಿವೆ. ಅನರ್ಟ್, ಆಗ್ರೋ ಇಂಡಸ್ಟ್ರೀಸ್, ದೂರದರ್ಶನ, ಆಕಾಶವಾಣಿ, ಅಗ್ನಿಶಾಮಕ ಮತ್ತು ರಕ್ಷಣಾ, ಜಿಲ್ಲಾ ನೈರ್ಮಲ್ಯ ಮಿಷನ್, ಕೃಷಿ ವಿಶ್ವವಿದ್ಯಾಲಯ, ರಾಷ್ಟ್ರೀಯ ಆಯುμï ಮಿಷನ್, ಹೋಮಿಯೋ, ಕುಟುಂಬಶ್ರೀ, ಐಸಿಡಿಎಸ್, ಮಹಿಳಾ ರಕ್ಷಣೆ, ಅಂಚೆ, ಅಬಕಾರಿ, ಮಿಲ್ಮಾ, ಸರ್ಕಾರಿ ಇಲಾಖೆಗಳ ಬಿಎಸ್‍ಎನ್ ಸ್ಟಾಲ್‍ಗಳನ್ನು ಸ್ಥಾಪಿಸಲಾಗಿದೆ. ಮೇಲೆ ಕಾರ್ಯಕ್ರಮದ ಅಂಗವಾಗಿ ಉಚಿತ ಆಯುರ್ವೇದ, ಹೋಮಿಯೋ, ಪ್ರಕೃತಿ ಮತ್ತು ಸಿದ್ಧ ವೈದ್ಯಕೀಯ ಶಿಬಿರ ಹಾಗೂ ಔಷಧ ವಿತರಣೆಯನ್ನು ಹಮ್ಮಿಕೊಳ್ಳಲಾಗಿದೆ.

           ನೆಡುಮಂಗಾಡ್ ಪುರಸಭೆ, ಕುಟುಂಬಶ್ರೀ ಐ.ಸಿ.ಡಿ.ಎಸ್. ಜಿಲ್ಲಾ ಕಾರ್ಯಕ್ರಮ ಕಛೇರಿ ಐಸಿಡಿಎಸ್, ನೆಡುಮÁ್ಗಡ್À ಹೆಚ್ಚುವರಿ ಯೋಜನೆ, ಶಿಕ್ಷಣ ಸಂಸ್ಥೆಗಳು ಮತ್ತು ವಿವಿಧ ಸರ್ಕಾರಿ ಇಲಾಖೆಗಳ ಸಹಯೋಗದಲ್ಲಿ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ನೆಡುಮಂಗಡ ಪುರಸಭೆ ಪುರಸಭೆ ಅಧ್ಯಕ್ಷ ಸಿ.ಎಸ್. ಶ್ರೀಜಾ, ಉಪಾಧ್ಯಕ್ಷ ಎಸ್. ರವೀಂದ್ರನ್, ಇತರೆ ಪುರಸಭೆ ಪ್ರತಿನಿಧಿಗಳು, ಪಿ.ಐ.ಬಿ. ಮತ್ತು ಸಿ.ಬಿ.ಸಿ. ಹೆಚ್ಚುವರಿ ಮಹಾನಿರ್ದೇಶಕ ವಿ. ಪಳನಿಚಾಮಿ, ಸೆಂಟ್ರಲ್ ಬ್ಯೂರೋ ಆಫ್ ಕಮ್ಯುನಿಕೇಷನ್ ಉಪನಿರ್ದೇಶಕ ಕೆ.ಎ. ಬೀನಾ ಮತ್ತಿತರರು ಭಾಗವಹಿಸಿದ್ದರು.




Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries