ಬದಿಯಡ್ಕ: ನೀರ್ಚಾಲು ಕಲ್ಲಕಟ್ಟ ಅರ್ತಲೆ ಶ್ರೀ ರಕ್ತೇಶ್ವರೀ ನಾಗ ಗುಳಿಗ ಸನ್ನಿಧಿಯ ಪುನರ್ನಿರ್ಮಾಣ ಸಮಿತಿ ರೂಪೀಕರಣ ಸಮಿತಿಯನ್ನು ರಚಿಸಲಾಯಿತು. ಶ್ರೀ ರಕ್ತೇಶ್ವರಿ ನಾಗ ಗುಳಿಗ ಸೇವಾಸಮಿತಿಯ ನೇತೃತ್ವದಲ್ಲಿ ಭಾನುವಾರ ಶ್ರೀ ಸನ್ನಿಧಿಯ ಪರಿಸರದಲ್ಲಿ ಸಭೆ ನಡೆಯಿತು.
ಶ್ರೀ ಸನ್ನಿಧಿಯ ಶಿಥಿಲಾವಸ್ಥೆಯನ್ನು ಮನಗಂಡು ಊರವರ ನೇತೃತ್ವದಲ್ಲಿ ಸ್ವರ್ಣ ಪ್ರಶ್ನೆ ಚಿಂತನೆ ನಡೆಸಿದಾಗ ಜೀರ್ಣೋದ್ಧಾರ ಕಾರ್ಯವನ್ನು ಮಾಡಬೇಕೆಂಬುದಾಗಿ ಕಂಡುಬಂದಿತ್ತು. ಸುಬ್ಬಣ್ಣ ನಾಯ್ಕ ಅರ್ತಲೆ ಅವರ ಅಧ್ಯಕ್ಷತೆಯಲ್ಲಿ ಪ್ರೊ.ಎ. ಶ್ರೀನಾಥ್ ಕೊಲ್ಲಂಗಾನ ಕ್ಷೇತ್ರದ ವಿವರಣೆಯನ್ನು ನೀಡಿದರು. ಮುಖ್ಯ ರಕ್ಷಾಧಿಕಾರಿಗಳಾಗಿ ಪರಮಪೂಜ್ಯ ಎಡನೀರು ಮಠದ ಶ್ರೀ ಸಚ್ಚಿದಾನಂದ `ಭಾರತೀ ಶ್ರೀಪಾದಂಗಳವರು, ಗೌರವ ರಕ್ಷಾಕಾರಿಗಳಾಗಿ ವೇದಮೂರ್ತಿ ಗಣೇಶ ತಂತ್ರಿ ಮುಂಡೋಡು, ಸತೀಶ್ ಕಂಡಿಗೆ ಕಲ್ಲಕಟ್ಟ, ರತನ್ ಕುಮಾರ್ ಕಾಮಡ, ಶ್ಯಾಮ ಭಟ್ ಕಲ್ಲಕಟ್ಟ, ವಿಷ್ಣು ಭಟ್ ಕಕ್ಕೆಪ್ಪಾಡಿ ಅವರನ್ನು ಆರಿಸಲಾಯಿತು. ರಕ್ಷಾಧಿಕಾರಿಗಳಾಗಿ ಮಧೂರು ಗ್ರಾಮಪಂಚಾಯಿತಿ ಅಧ್ಯಕ್ಷ ಗೋಪಾಲಕೃಷ್ಣ, ರಾಮ ಕಾರ್ಮಾರು, ಮಹೇಶ್ ವಳಕ್ಕುಂಜ, ಗಣೇಶ ಕೃಷ್ಣ ಅಳಕ್ಕೆ, ಮಂಜುನಾಥ ಡಿ.ಮಾನ್ಯ, ಮಾಧವ ಮಾಸ್ತರ್ ಕೂಡ್ಲು, ಗೌರವಾಧ್ಯಕ್ಷರಾಗಿ ಗೋಪಾಲಕೃಷ್ಣ ನಾವಡ ಓಣಿಕುಂಡು, ಅಧ್ಯಕ್ಷರಾಗಿ ಪ್ರೊ.ಎ.ಶ್ರೀನಾಥ್, ಕಾರ್ಯಾಧ್ಯಕ್ಷರಾಗಿ ಪ್ರಮೋದ್ ಕುಮಾರ್ ಕೊಲ್ಲಂಗಾನ, ಪ್ರಧಾನ ಕಾರ್ಯದರ್ಶಿಯಾಗಿ ರಮೇಶ ಎಂ.ಅರ್ತಲೆ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಸುಂದರ ಶೆಟ್ಟಿ ಕೊಲ್ಲಂಗಾನ, ಗ್ರಾಪಂ ಸದಸ್ಯ ಶ್ಯಾಮಪ್ರಸಾದ ಮಾನ್ಯ, ಕೃಷ್ಣ ನಾಯ್ಕ ಅರ್ತಲೆ, ಮಹಾಲಿಂಗ ನಾಯ್ಕ ಅರ್ತಲೆ, ಬ್ಲಾಕ್ ಪಂಚಾಯಿತಿ ಸದಸ್ಯೆ ವಿದುಷಿಃ ಅಶ್ವಿನಿ ಭಟ್, ಕಾರ್ಯದರ್ಶಿಯಾಗಿ ವೇಣುಗೋಪಾಲ ಅರ್ತಲೆ, ಉದಯ ಆಚಾರ್ಯ, ಕಿಶೋರ, ಚಂದ್ರ ರೈ ಹಾಗೂ ಖಚಾಂಜಿಯಾಗಿ ಐತ್ತಪ್ಪ ನಾಯ್ಕ ಮರ್ದಂಬೈಲು, ಆದರ್ಶ ಎಂ. ಅರ್ತಲ ಅವರನ್ನು ಆರಿಸಲಾಯಿತು. ಮಹಿಳಾ ಸಮಿತಿಗೆ ಗೌರವಾಧ್ಯಕ್ಷೆಯಾಗಿ ವನಿತಾ ಐತ್ತಪ್ಪ ನಾಯ್ಕ, ಅಧ್ಯಕ್ಷರಾಗಿ ಸುಲೋಚನ, ಕಾರ್ಯದರ್ಶಿಯಾಗಿ ಚಂದ್ರಾವತಿ, ಖಚಾಂಜಿಯಾಗಿ ಶಾಂತ ಅವರನ್ನು ಆರಿಸಲಾಯಿತು. ಊರಿನ ಪ್ರಮುಖರು, ಕಾರ್ಯಕರ್ತರನ್ನು ಒಳಗೊಂಡ ಸಮಿತಿಯನ್ನು ರೂಪಿಸಲಾಯಿತು..
ಕಲ್ಲಕಟ್ಟ ಅರ್ತಲೆ ಶ್ರೀ ರಕ್ತೇಶ್ವರಿ ನಾಗ ಗುಳಿಗ ಸನ್ನಿಧಿಯ ಪುನರ್ ನಿರ್ಮಾಣ ಸಮಿತಿ ರೂಪೀಕರಣ
0
February 01, 2023