ಕಾಸರಗೋಡು: ಯಕ್ಷಗಾನ ಬೊಂಬೆಯಾಟ ಬಹುಭಾಷಾ ಸಂಗಮ ಭೂಮಿ ಕಾಸರಗೋಡಿನ ಸಾಂಸ್ಕøತಿಕ ಪರಂಪರೆಯನ್ನು ಮತ್ತಷ್ಟು ಗಟ್ಟಿಗೊಳಿಸಿರುವುದಾಗಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಧಿಕಾರ ಅಧ್ಯಕ್ಷ ಡಾ. ಸಿ. ಸೋಮಶೇಖರ್ ತಿಳಿಸಿದ್ದಾರೆ.
ಅವರು ಯಕ್ಷಪುತ್ಥಳಿ ಬೊಂಬೆಮನೆ ಟ್ರಸ್ಟ್ ಕಾಸರಗೋಡು, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಧಿಕಾರ ಬೆಂಗಳೂರು ಹಾಗೂ ಕಾಸರಗೋಡು ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘ ವತಿಯಿಂದ ಕಾಸರಗೋಡು ಪಿಲಿಕುಂಜೆಯ ಯಕ್ಷ ಪುತ್ಥಳಿ ಬೊಂಬೆ ಮನೆಯಲ್ಲಿ ಶುಕ್ರವಾರ ಯಕ್ಷಗಾನದ ನೂತನ ಸೂತ್ರದ ಬೊಂಬೆಗಳ ಅನಾವರಣ ನೆರವೇರಿಸಿ ಮಾತನಾಡಿದರು.
ಕಲಾವಿದನಾದವನಿಗೆ ಬೇಡುವ ಸನ್ನಿವೇಶ ಸೃಷ್ಟಿಯಾಗದಂತೆ ನೋಡಿಕೊಳ್ಳುವುದು ಸರ್ಕಾರದ ಕರ್ತವ್ಯ.ಕಲಾವಿದ ಕಣ್ಣೀರು ಹಾಕುವ ಸ್ಥಿತಿ ಬಂದೊದಗಿದರೆ, ಅದು ಮೌಲಿಕ ಅಧ:ಪತನಕ್ಕೆ ದಾರಿಯಾಗಲಿದೆ. ಸಾಹಸವಿಲ್ಲದ ಬದುಕಿನಿಂದ ಚರಿತ್ರೆ ಸೃಷ್ಟಿಸಲು ಎಂದಿಗೂ ಸಾಧ್ಯವಿಲ್ಲ. ಕ್ಲಿಷ್ಟಕರ ಸನ್ನಿವೇಶದಲ್ಲೂ, ಅಳಿವಿನಂಚಿನಲ್ಲಿರುವ ಬೊಂಬೆಯಾಟ ಕಲೆಯನ್ನು ಮುಂದುವರಿಸಿಕೊಂಡು ಹೋಗುವ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘದ ಕಾರ್ಯ ಶ್ಲಾಘನೀಯವಾದುದು ಎಂದು ತಿಳಿಸಿದರು.
ಶಾಸಕ ಎನ್.ಎ ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿ ಮಾತನಾಡಿ, ಯಕ್ಷಗಾನ ಕಾಸರಗೋಡಿನ ಸ್ವಂತ ಕಲೆಯಾಗಿದ್ದು, ಸಂಸ್ಕøತಿಯ ಪೋಷಣೆಯಲ್ಲೂ ಇದು ಮಹತ್ವದ ಪಾತ್ರ ವಹಿಸುತ್ತಿದೆ. ಭಾಷೆಯ ಬೆಳವಣಿಗೆಗೂ ಯಕ್ಷಗಾನ ಸಹಕಾರಿಯಾಗಿದೆ ಎಂದು ತಿಳಿಸಿದರು.
ನೆರವಿನ ಹಸ್ತ ಬೇಕಾಗಿದೆ:
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಖ್ಯಾತ ಶಿಕ್ಷಣ ತಜ್ಞ, ಚಿಂತಕ ಪ್ರೊ. ಕೆ.ಇ ರಾಧಾಕೃಷ್ಣ ಅವರು ಮಾತನಾಡಿ, ಯಕ್ಷಗಾನದ ಪಿತಾಮಹ ಪಾರ್ತಿಸುಬ್ಬರ ತವರಲ್ಲಿ ಯಕ್ಷಗಾನ ಬೊಂಬೆಯಾಟ ತಂಡವನ್ನು ಕಟ್ಟಿಕೊಂಡು ದೇಶ ವಿದೆಸಗಳಲ್ಲಿ ಪ್ರದರ್ಶನ ನೀಡುತ್ತಾ ಬರುತ್ತಿರುವ ಯಕ್ಷಗಾನ ಬೊಂಬೆಯಾಟ ತಂಡದ ಸಾಧನೆ ಶ್ಲಾಘನೀಯ. ವಿನಾಶದ ಅಂಚಿನಲ್ಲಿರುವ ಯಕ್ಷಗಾನ ಬೊಂಬೆಯಾಟಕ್ಕೆ ಸರ್ಕಾರದ ಹಾಗೂ ಸಂಘ ಸಂಸ್ಥೆಗಳ ನೆರವಿನ ಹಸ್ತ ಬೇಕಾಗಿದೆ ಎಂದು ತಿಳಿಸಿದರು.
ಕರ್ನಾಟಕ ವಿಧಾನಪರಿಷತ್ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಎಸ್. ಪ್ರದೀಪ್ ಕುಮಾರ್ ಕಲ್ಕೂರ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಧಿಕಾರ ಕಾರ್ಯದರ್ಶಿ ಪ್ರಕಾಶ್ ಮತ್ತಿಹಳ್ಳಿ, ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕ ಅಧ್ಯಕ್ಷ ಎಸ್.ವಿ ಭಟ್, ಜಿಲ್ಲಾ ಕನ್ನಡ ಮಾಧ್ಯಮ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎ.ಆರ್ ಸುಬ್ಬಯ್ಯಕಟ್ಟೆ ಉಪಸ್ಥಿತರಿದ್ದರು. ಯಕ್ಷಪುತ್ಥಳಿ ಬೊಂಬೆಮನೆ ಟ್ರಸ್ಟ್ ಸಂಚಾಲಕ ಕೆ.ವಿ ರಮೇಶ್ ಸ್ವಾಗತಿಸಿದರು. ಜಗದೀಶ್ ಕುಡ್ಲು ಕಾರ್ಯಖ್ರಮ ನಿರೂಪಿಸಿದರು. ಭವ್ಯಶ್ರೀ ಬಲ್ಲಾಳ್ ವಂದಿಸಿದರು.