HEALTH TIPS

ಪೊಲೀಸ್ ಕಾಯಾಚರಣೆ-ಅಪರ ಪ್ರಮಾಣದ ತಂಬಾಕು ಉತ್ಪನ್ನ ವಶ, ನಾಲ್ವರ ಬಂಧನ

          ಕಾಸರಗೋಡು: ಜಿಲ್ಲೆಯ ಎರಡು ಕೇಂದ್ರಗಳಿಗೆ ದಾಳಿ ನಡೆಸಿದ ಪೊಲೀಸರು ಅಪಾರ ಪ್ರಮಾಣದ ನಿಷೇಧಿತ ತಂಬಕು ಉತ್ಪನ್ನ ವಸಪಡಿಸಿಕೊಂಡಿದ್ದು, ನಾಲ್ಕು ಮಂದಿಯನ್ನು ಬಂಧಿಸಿದ್ದಾರೆ.  

            ಕಸಬಾ ಕೋಟಕಣಿ ನಿವಾಸಿ ಜಯಗೋವಿಂದ್ ಹಾಗೂ ಚೆಂಗಳ ಚೆಟ್ಟುಂಗುಳಿ ನಿವಾಸಿ ಜಲೀಲ್ ಬಂಧಿತರು. ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಾ.ವೈಭವ್ ಸಕ್ಸೇನಾ ಅವರ ಕ್ಲೀನ್ ಕಾಸರಗೋಡು ಯೋಜನೆಯನ್ವಯ ತಪಾಸಣೆ ನಡೆಸಲಾಯಿತು.ವಿದ್ಯಾನಗರ ಮತ್ತು ಕಾಸರಗೋಡು ಪೆÇಲೀಸ್ ಠಾಣಾ ವ್ಯಾಪ್ತಿಯಿಂದ ನಿಷೇಧಿತ ತಂಬಾಕು ಉತ್ಪನ್ನಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಧೂರು ಸನಿಹದ ಚಟ್ಟುಂಗುಳಿಯಿಂದ ಎರಡುವರೆ ಲಕ್ಷ ರೂ. ಮೌಲ್ಯದ ತಂಬಾಕು ಉತ್ಪನ್ನ ಹಾಗೂ ಕಾಸರಗೋಡು ಕೋಟೆಕಣಿ ರಸ್ತೆಯ ಇತರ ರಜ್ಯ ಕಾರ್ಮಿಕರು ವಾಸಿಸುತ್ತಿರುವ ಮನೆಯೊಂದರಲ್ಲಿ ದಾಸ್ತಾನಿರಿಸಿದ್ದ 2330ಪ್ಯಾಕೆಟ್ ತಂಬಾಕು ಉತ್ಪನ್ನ ವಶಪಡಿಸಿಕೊಳ್ಳಲಾಗಿದೆ. ಇತರ ರಾಜ್ಯ ಕಾಮಿಕರು, ವಿದ್ಯಾರ್ಥಿಗಳನ್ನು ಕೇಂದ್ರೀಕರಿಸಿ ತಂಬಕು ಉತ್ಪನ್ನ ಮಾರಾಟ ಮಾಡಲಾಗುತ್ತಿದೆ. ವಿವಿಧೆಡೆಯಿಂದ ತರಕಾರಿ ಸಾಗಾಟದ ಮರೆಯಲ್ಲಿ ಕನಾಟಕ-ಕೇರಳ ಗಡಿ ಪ್ರದೇಶ ಗಾಳಿಮುಖಕ್ಕೆ ತಂಬಾಕು ಉತ್ಪನ್ನಗಳನ್ನು ತಂದು ಅಲ್ಲಿಂದ ಕಾಸರಗೋಡಿಗೆ ಪೂರೈಸಲಾಗುತ್ತಿದೆ. ಕಾಸರಗೋಡು ಡಿವೈಎಸ್ಪಿ ಪಿ.ಕೆ.ಸುಧಾಕರನ್, ಕಾಸರಗೋಡು ಠಾಣೆ ಎಸ್‍ಐ ವಿಷ್ಣುಪ್ರಸಾದ್ ನೇತೃತ್ವದ ಪೊಲೀಸರ ತಮಡ ಕಾರ್ಯಚರಣೆ ನಡೆಸಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries