ತಿರುವನಂತಪುರಂ: ಯುಡಿಎಫ್ ಪ್ರತಿಭಟನೆ ವೇಳೆ ಸೆಕ್ರೆಟರಿಯೇಟ್ ಎದುರು ಪ್ರತಿಭಟನಾಕಾರರು, ಉದ್ಯೋಗಿಗಳು ಮತ್ತು ಪೆÇಲೀಸರ ನಡುವೆ ಘರ್ಷಣೆ ನಡೆದಿದೆ.
ಸೆಕ್ರೆಟರಿಯೇಟ್ ಮುತ್ತಿಗೆ ಹಾಕಿ ಪ್ರತಿಭಟನೆ ವೇಳೆ ಸಂಘರ್ಷ ಸೃಷ್ಟಿಯಾಯಿತು. ಮುಷ್ಕರ ನಡೆಯುತ್ತಿದ್ದ ಉತ್ತರ ದ್ವಾರದ ಮೂಲಕ ನೌಕರರು ತೆರಳುವ ವಿಚಾರವಾಗಿ ಉಭಯ ತಂಡಗಳ ನಡುವೆ ಮಾತಿನ ಚಕಮಕಿ ನಡೆದು ಸಂಘರ್ಷಕ್ಕೆ ಕಾರಣವಾಯಿತು.
ಪೊಲೀಸರು ಮುಷ್ಕರವನ್ನು ತಡೆಯಲು ಯತ್ನಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು. ನೌಕರರನ್ನು ಕೆಲಸಕ್ಕೆ ಬಾರದಂತೆ ತಡೆದಿರುವ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿದರು. ಇದು ಮಾತಿನ ಚಕಮಕಿಗೂ ಕಾರಣವಾಯಿತು.
ರಾಜ್ಯ ಸರ್ಕಾರದ ಎರಡನೇ ವμರ್Áಚರಣೆಯನ್ನು ಸೆಕ್ರೆಟರಿಯೇಟ್ಗೆ ಮುತ್ತಿಗೆ ಹಾಕಿ ಪ್ರತಿಭಟನೆಯ ದಿನವನ್ನಾಗಿ ಆಚರಿಸಿದ ಯುಡಿಎಫ್ ನಡೆ ವಿವಾದಕ್ಕೀಡಾಯಿತು. ಪ್ರತಿಭಟನೆ ಹಿನ್ನೆಲೆಯಲ್ಲಿ ತಿರುವನಂತಪುರಂನಲ್ಲಿ ಸಂಚಾರ ನಿರ್ಬಂಧ ಹೇರಲಾಗಿತ್ತು.