ಕಾಸರಗೋಡು: ಜಿಲ್ಲೆಯ ಶಾಲಾ ವಾಹನಗಳು ಮಕ್ಕಳಿಂದ ತುಂಬಿ ತುಳುಕುತ್ತಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಕಾಸರಗೋಡು ಹೊಸದುರ್ಗ ತಾಲೂಕುಗಳಲ್ಲಿ ಕಂದಾಯ ಕಾಸರಗೋಡು ಆರ್.ಟಿ.ಓ. ಜಾರಿ ತಂಡ ಜಂಟಿಯಾಗಿ ತಪಾಸಣೆ ನಡೆಸಿತು.
ಕಾಸರಗೋಡು ತಾಲೂಕಿನಲ್ಲಿ ಆರ್ಡಿಒ ಅತುಲ್ ಎಸ್.ನಾಥ್ ನೇತೃತ್ವದಲ್ಲಿ ಹಾಗೂ ಹೊಸದುರ್ಗ ತಾಲೂಕಿನಲ್ಲಿ ಸಬ್ ಕಲೆಕ್ಟರ್ ಸುಫಿಯಾನ್ ಅಹಮದ್ ನೇತೃತ್ವದಲ್ಲಿ ತಪಾಸಣೆ ನಡೆಸಲಾಯಿತು. ಹೊಜದುರ್ಗ ತಾಲೂಕಿನಲ್ಲಿ 16 ಶಾಲಾ ವಾಹನಗಳನ್ನು ತಪಾಸಣೆ ಮಾಡಲಾಯಿತು.
ಒಬ್ಬರು ಮಿತಿಗಿಂತ ಹೆಚ್ಚು ಮಕ್ಕಳನ್ನು ಹೊತ್ತೊಯ್ದಿರುವುದು ಕಂಡು ಬಂದಿದ್ದು, 1500 ರೂ. ಜಂಟಿ ಆರ್ಟಿಒ ಬಿಜು, ಮೋಟಾರು ವಾಹನ ನಿರೀಕ್ಷಕರಾದ ಸಾಜು ಫ್ರಾನ್ಸಿಸ್, ಜಯನ್ ಹಾಗೂ ಎಎಂವಿಎಂಗಳಾದ ಸಿ.ವಿ.ಜಿಜೋ ವಿಜಯ್, ಸುಧೀಶ್, ಪಿ.ವಿ.ವಿಜೇಶ್, ವಿನೀತ್ ಉಪಸ್ಥಿತರಿದ್ದರು. ಕಾಸರಗೋಡು ತಾಲೂಕಿನಲ್ಲಿ 12 ವಾಹನಗಳನ್ನು ತಪಾಸಣೆ ನಡೆಸಲಾಯಿತು. ಎಂಟು ಮಂದಿ ಮಿತಿ ಮೀರಿ ಮಕ್ಕಳನ್ನು ಹೊತ್ತೊಯ್ದಿರುವುದು ಪತ್ತೆಯಾಗಿದೆ. 9500 ದಂಡ ವಸೂಲಿ ಮಾಡಲಾಗಿದೆ. ಮೋಟಾರು ವಾಹನ ನಿರೀಕ್ಷಕ ಚಂದ್ರಕುಮಾರ್, ಎಎಂವಿಐ ಎಂ.ಪ್ರವೀಣ್ ಕುಮಾರ್ ಭಾಗವಹಿಸಿದ್ದರು.