HEALTH TIPS

ಶಬರಿಮಲೆಗೆ ಶತಾಯುಷಿ ವೃದ್ಧೆ; ಇಸ್ರೇಲ್‌-ಹಮಾಸ್‌ ಯುದ್ಧ ಸ್ಥಗಿತಕ್ಕೆ ಪ್ರಾರ್ಥನೆ

               ತಿರುವನಂತಪುರಂ: ಕೇರಳದ ವೈಯನಾಡ್‌ನ ಮೂನ್ನನಕುಜಿ ಗ್ರಾಮದ ಶತಾಯುಷಿ ಪಾರುಕುಟ್ಟಿಯಮ್ಮ ಎಂಬುವರು ಸೋಮವಾರ ಶಬರಿಮಲೆಗೆ ಪ್ರಥಮ ಬಾರಿಗೆ ಭೇಟಿ ನೀಡಿ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದಿದ್ದಾರೆ.

            ಈ ವೃದ್ಧೆಯು ತನ್ನ ಮೊಮ್ಮಗ ಮತ್ತು ಆತನ ಮಕ್ಕಳ ಸಮೇತ ಶಬರಿಮಲೆಗೆ ಭೇಟಿ ನೀಡಿದರು.

ದೇಗುಲವು ಭಕ್ತರಿಂದ ತುಂಬಿ ತುಳುಕುತ್ತಿತ್ತು. ಹಾಗಾಗಿ, ದೇವಸ್ಥಾನದ ಆಡಳಿತ ಮಂಡಳಿಯು ಪಾರುಕುಟ್ಟಿಯಮ್ಮ ಅವರಿಗೆ ವಿಶೇಷ ವ್ಯವಸ್ಥೆ ಕಲ್ಪಿಸಿತ್ತು. ಹದಿನೆಂಟು ಮೆಟ್ಟಿಲುಗಳನ್ನು ಏರಿದ ಅವರು ದೇವರ ದರ್ಶನ ಪಡೆದರು. ಬಳಿಕ ಮಂಡಳಿಯಿಂದ ಅವರಿಗೆ ಶಾಲು ಹೊದಿಸಿ ಸನ್ಮಾನಿಸಲಾಯಿತು.

ಪಾರುಕುಟ್ಟಿಯಮ್ಮ ಜನಿಸಿದ್ದು 1923ರಲ್ಲಿ. ಶಬರಿಮಲೆಗೆ ಭೇಟಿ ನೀಡುವುದು ಅವರ ಬಾಲ್ಯದ ಕನಸಾಗಿತ್ತು. ಆದರೆ, ಅದು ಈಡೇರಿಲಿಲ್ಲ. ಹಾಗಾಗಿ, ಎಳವೆಯಲ್ಲಿ ಕಂಡಿದ್ದ ಕನಸನ್ನು ಬಾಳಿನ ಮುಸ್ಸಂಜೆಯಲ್ಲಿ ಈಡೇರಿಸಿಕೊಂಡಿದ್ದಾರೆ.

                  'ದರ್ಶನಕ್ಕೆ ಅವಕಾಶ ಕಲ್ಪಿಸಿದವರಿಗೆ ಒಳ್ಳೆಯದಾಗಲಿ. ನನ್ನ ಮೊಮ್ಮಗನ ಪತ್ನಿ ಇಸ್ರೇಲ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಹಾಗಾಗಿ, ಇಸ್ರೇಲ್‌ ಮತ್ತು ಹಮಾಸ್‌ ನಡುವಿನ ಕದನ ಶೀಘ್ರವೇ ಮುಕ್ತಾಯಗೊಳ್ಳಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದೇನೆ' ಎಂದು ತಿಳಿಸಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries