HEALTH TIPS

ಎನ್‌ಸಿಇಆರ್‌ಟಿ ಕ್ರಮ ಐತಿಹಾಸಿಕ ಸಂಗತಿ ಅಳಿಸುವ ಕೆಲಸ: ಕೇರಳ

                ತಿರುವನಂತಪುರ: ಬಾಬರಿ ಮಸೀದಿ ಧ್ವಂಸ ಹಾಗೂ ಗುಜರಾತ್‌ ಗಲಭೆಗಳಲ್ಲಿ ಮುಸ್ಲಿಮರ ಹತ್ಯೆಯ ಕುರಿತ ಉಲ್ಲೇಖಗಳನ್ನು ಕೈಬಿಡಲು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ಕೈಗೊಂಡ ತೀರ್ಮಾನವನ್ನು ಟೀಕಿಸಿರುವ ಕೇರಳ ಸರ್ಕಾರ, 'ಇದು ಪಠ್ಯಪುಸ್ತಕಗಳಿಂದ ಐತಿಹಾಸಿಕ ಸಂಗತಿಗಳನ್ನು' ಅಳಿಸುವ ಕೆಲಸ ಎಂದು ದೂರಿದೆ.

             ಈ ವಿಚಾರದಲ್ಲಿ ಕೇರಳದ ನಿಲುವು ದೃಢವಾಗಿದೆ ಎಂದು ಅಲ್ಲಿನ ಶಿಕ್ಷಣ ಸಚಿವ ವಿ. ಶಿವನ್ ಕುಟ್ಟಿ ಹೇಳಿದ್ದಾರೆ. 'ಎನ್‌ಸಿಇಆರ್‌ಟಿ ಈ ಹಿಂದೆಯೂ ಇಂಥದ್ದೇ ಯತ್ನ ನಡೆಸಿತ್ತು. ಇತಿಹಾಸ, ಸಮಾಜ ವಿಜ್ಞಾನ ಮತ್ತು ರಾಜ್ಯಶಾಸ್ತ್ರದ ಪಠ್ಯಪುಸ್ತಕಗಳಿಂದ ಕೆಲವು ಅಂಶಗಳನ್ನು ಕೈಬಿಟ್ಟಿತ್ತು. ಇದಕ್ಕೆ ಪ್ರತಿಕ್ರಿಯೆಯಾಗಿ ಕೇರಳ ಸರ್ಕಾರವು, ಕೈಬಿಟ್ಟ ಅಂಶಗಳನ್ನು ಒಳಗೊಂಡ ಹೆಚ್ಚುವರಿ ಪಠ್ಯಪುಸ್ತಕವನ್ನು ಆಗ ಮುದ್ರಿಸಿತ್ತು' ಎಂದು ಸಚಿವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries