HEALTH TIPS

ಸಮಸ್ಯೆಗಳಿಗೆ ಸತ್ಯ, ಅಹಿಂಸೆಯೇ ಪರಿಹಾರ: ಪ್ರಧಾನಿ ನರೇಂದ್ರ ಮೋದಿ

              ವದೆಹಲಿ: 'ಜಗತ್ತಿನ ಹಲವು ರಾಷ್ಟ್ರಗಳು ಯುದ್ಧದ ಮನಸ್ಥಿತಿಗೆ ವಾಲುತ್ತಿರುವ ಈಗಿನ ಸಂದರ್ಭದಲ್ಲಿ ಭಾರತದ ತೀರ್ಥಂಕರರ ಬೋಧನೆಗಳು ಮತ್ತು ಅಹಿಂಸೆಯ ತತ್ವವು ಹೆಚ್ಚು ಪ್ರಸ್ತುತವಾಗುತ್ತಿದೆ' ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟರು.

              ಭಾನುವಾರ ಇಲ್ಲಿ ಭಗವಾನ್‌ ಮಹಾವೀರರ 2,550ನೇ ನಿರ್ವಾಣ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 'ಪ್ರತ್ಯೇಕತಾ ಭಾವನೆಯು ಬೇರೂರುತ್ತಿರುವ ಪ್ರಸ್ತುತ ಸಂದರ್ಭದಲ್ಲಿ, ಭಾರತವು ವಿಶ್ವಬಂಧುವಿನ ಸ್ಥಾನದಲ್ಲಿದೆ' ಎಂದು ಪ್ರತಿಪಾದಿಸಿದರು.

             'ಜಗತ್ತು ಇಂದು ಎದುರಿಸುತ್ತಿರುವ ಹಲವು ಸಮಸ್ಯೆಗಳಿಗೆ ಸತ್ಯ ಮತ್ತು ಅಹಿಂಸೆಯ ತತ್ವಗಳೇ ಪರಿಹಾರ ಎಂದು ಭಾರತವು ಈಗ ಜಾಗತಿಕ ವೇದಿಕೆಯಲ್ಲಿ ಬಿಂಬಿಸುತ್ತಿದೆ. ಭಾರತಕ್ಕಿರುವ ಸಾಂಸ್ಕೃತಿಕ ವರ್ಚಸ್ಸು ನಿರ್ಣಾಯಕ ಪಾತ್ರ ವಹಿಸುತ್ತಿದೆ' ಎಂದು ಅಭಿಪ್ರಾಯಪಟ್ಟರು.

              ಇದೇ ಸಂದರ್ಭದಲ್ಲಿ ಅವರು ನಿರ್ವಾಣ ಮಹೋತ್ಸವದ ನಿಮಿತ್ತ ತರಲಾದ ಅಂಚೆ ಚೀಟಿ ಮತ್ತು ನಾಣ್ಯವನ್ನು ಬಿಡುಗಡೆ ಮಾಡಿದರು.

                '2014ರಲ್ಲಿ ನಾವು ಅಧಿಕಾರಕ್ಕೆ ಬಂದಾಗ ದೇಶವು ಹತಾಶ ಭಾವನೆಯಲ್ಲಿ ಮುಳುಗಿತ್ತು' ಎಂದು ಹಿಂದಿನ ಯುಪಿಎ ಸರ್ಕಾರದ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

'ನಾವು ದೇಶದಲ್ಲಿ ಸಂಸ್ಕೃತಿ, ಪರಂಪರೆಗೆ ಹೆಚ್ಚು ಉತ್ತೇಜನ ನೀಡುತ್ತಿದ್ದೇವೆ. ಯೋಗ ಮತ್ತು ಆಯುರ್ವೇದ ಚಿಕಿತ್ಸೆಗೆ ಪ್ರೋತ್ಸಾಹ ನೀಡಲಾಗುತ್ತಿದೆ' ಎಂದು ಹೇಳಿದರು.

                'ಲೋಕಸಭೆ ಚುನಾವಣೆಯನ್ನು ಉಲ್ಲೇಖಿಸಿ, ಇದು ಪ್ರಜಾಪ್ರಭುತ್ವದ ಅತಿದೊಡ್ಡ ಹಬ್ಬ. ಈ ಚುನಾವಣೆಯೊಂದಿಗೆ ಭವಿಷ್ಯದತ್ತ ಹೊಸ ಪಯಣ ಆರಂಭವಾಗಲಿದೆ ಎಂದು ರಾಷ್ಟ್ರ ವಿಶ್ವಾಸವಿಟ್ಟಿದೆ' ಎಂದು ಹೇಳಿದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries