ಕಾಸರಗೋಡು: ಸಾಮಾಜಿಕ, ಸಾಂಸ್ಕøತಿಕ ಸಂಸ್ಥೆ ರಂಗಚಿನ್ನಾರಿ ಕಾಸರಗೋಡು ಸಂಘಟನೆಯ ಸಂಗೀತ ಘಟಕ ಸ್ವರಚಿನ್ನಾರಿ ವತಿಯಿಂದ ಭಕ್ತಿ ಗೀತೆಗಳ ಗಾಯನ 'ಭಕ್ತಿ ತೀರ್ಥ'ಕಾರ್ಯಕ್ರಮ ಫೆ, 2ರಂದು ಸಂಜೆ 5ಕ್ಕೆ ಕಾಸರಗೋಡು ಕರಂದಕ್ಕಾಡಿನ ಪದ್ಮಗಿರಿ ಕಲಾಕುಟೀರದಲ್ಲಿ ಜರುಗಲಿದೆ. ಬೆಂಗಳೂರಿನ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಕಾರದೊಂದಿಗೆ ಕಾರ್ಯಕ್ರಮ ಜರುಗಲಿದೆ.
ಖ್ಯಾತ ವೈದ್ಯ, ಕಲಾವಿದ ಡಾ. ಶಂಕರ್ರಾಜ್ ಆಲಂಪಾಡಿ ಸಮಾರಂಭ ಉದ್ಘಾಟಿಸುವರು. ವಕೀಲ, ಪಬ್ಲಿಕ್ ನೋಟರಿ ಎ.ಎನ್ ಅಶೋಕ್ ಕುಮಾರ್ ಅಧ್ಯಕ್ಷತೆ ವಹಿಸುವರು. ಖ್ಯಾತ ಹರಿದಾಸ, ವಕೀಲ ಶಂನಾಡಿಗ ಕುಂಬಳೆ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ನೇತ್ರ ತಜ್ಞ, ಧಾರ್ಮಿಕ ಮುಂದಾಳು ಡಾ. ಅನಂತ ಕಾಮತ್ ಗೌರವ ಉಪಸ್ಥಿತರಿರುವರು.
ಪಂಡಿತ್ ಕೃಷ್ಣೇಂದ್ರ ವಾಡೇಕರ್ ಹಾಗೂ ಅರವಿಂದ ಆಚಾರ್ಯ ಮಾಣಿಲಭಕ್ತಿ ತೀರ್ಥ ಕಾರ್ಯಕ್ರಮ ನಡೆಸಿಕೊಡುವರು. ರಾಜೇಶ್ ಭಾಗವತ್, ಗಣಪತಿ ಪ್ರಭು ಮುಲ್ಕಿ, ಸ್ವಯಂ ಪ್ರಭು ಸಹಕರಿಸುವರು.


