HEALTH TIPS

ಆರಿಕ್ಕಾಡಿ ಕೋಟೆ ನಿಧಿ ಶೋಧನೆ-ಪ್ರಾಚ್ಯವಸ್ತು ಇಲಾಖೆ ದೂರಿನನ್ವಯ ಮತ್ತೊಂದು ಕೇಸು

ಕುಂಬಳೆ:  ಆರಿಕ್ಕಾಡಿ ಕೋಟೆ ವಠಾರದ ಪಾಳುಬಾವಿಯಲ್ಲಿ ನಿಧೀ ಶೋಧ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಕುಂಬಳೆ ಠಾಣೆ ಪೊಲೀಸರು ಮತ್ತೊಂದು ಕೇಸು ದಾಖಲಿಸಿಕೊಂಡಿದ್ದಾರೆ. ಪ್ರಾಚ್ಯವಸ್ತು ಇಲಾಖೆ ಸಿಬ್ಬಂದಿ ದೂರಿನನ್ವಯ ಮೊಗ್ರಾಲ್ ಪುತ್ತೂರು ಗ್ರಾ.ಪಂ. ಉಪಾಧ್ಯಕ್ಷ ಮುಜೀಬ್ ರಹಮಾನ್ ಕಂಬಾರು ಸೇರಿದಂತೆ ಐವರ ತಂಡದ ವಿರುದ್ಧ ಈ ಕೇಸು ದಾಖಲಾಗಿದೆ.  ಕೊಟೆಯ ಒಳಗೆ ಅನುಮತಿ ರಹಿತವಾಗಿ ಪ್ರವೇಶಿಸಿ ಪ್ರಾಚೀನ ಬಾವಿಯಲ್ಲಿ ಇದೆಯೆನ್ನಲಾದ ನಿಧಿಯನ್ನು ಅಗೆದು ತೆಗೆಯಲು ಪ್ರಯತ್ನಸಿದ ಘಟನೆಯಲ್ಲಿ ತೊಡಗಿಸಿಕೊಂಡಿರುವ ಬಗ್ಗೆ ಕೇಸು ದಾಖಲಾಗಿದೆ.

ಆರಿಕ್ಕಾಡಿ ಕೋಟೆಯ ಕಾವಲು ಮತ್ತು ಇಲ್ಲಿಗೆ ಆಗಮಿಸುವ ಪ್ರವಾಸಿಗರ ಮಾರ್ಗದರ್ಶನಕ್ಕಾಗಿ ಪ್ರಾಚ್ಯವಸ್ತು ಇಲಾಖೆ ಕೇರಳ ಘಟಕ ನೇಂಇಸಿರುವ ಚೆಂಬೇರಿ ನಿವಾಸಿ ನಿಶಾಂತ್ ಎಂಬವರು ನೀಡಿದ ದೂರಿನನ್ವಯ ಈ ಕೇಸು ದಾಖಲಾಗಿದೆ.

ನಿಧಿ ಅಪಹರಣದಷ್ಟೇ ನಿಧಿಶೋಧನೆಯೂ ಗಂಭೀರ ಅಪರಾಧವಾಗಿದ್ದು, ಅಪರಾಧಿಗಳನ್ನು ಸೆರೆಹಿಡಿದಿದ್ದ ಪೊಲೀಸರು ಠಾಣೆಯಿಂದಲೇ ಜಾಮೀನು ನೀಡಿ ಬಿಡುಗಡೆಗೊಳಿಸಿದ್ದರು. ಪ್ರಾಚ್ಯವಸ್ತು ಇಲಾಖೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಬಿಡುಗಡೆಗೊಂಡ ಆರೋಪಿಗಳನ್ನು ಪೊಲೀಸರು ಮತ್ತೆ ಬಂಧಿಸಲು ಮುಂದಗಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries