HEALTH TIPS

ನ್ಯಾಯಾಂಗ ಸಹಕಾರ: ಭಾರತ -ನೇಪಾಳ 'ಸುಪ್ರೀಂ ಕೋರ್ಟ್‌' ನಡುವೆ ಒಪ್ಪಂದ

ಕಠ್ಮಂಡು: ಭಾರತ ಮತ್ತು ನೇಪಾಳ ದೇಶಗಳ ಸುಪ್ರೀಂ ಕೋರ್ಟ್‌ಗಳು ಸೋಮವಾರ ಇಲ್ಲಿ ನ್ಯಾಯಾಂಗ ಸಹಕಾರ ಮತ್ತು ಅಭಿವೃದ್ಧಿ ಕುರಿತ ಒಪ್ಪಂದಕ್ಕೆ ಸಹಿ ಹಾಕಿದವು.

ಭಾರತ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನೇಪಾಳದ ಮುಖ್ಯ ನ್ಯಾಯಮೂರ್ತಿ ಪ್ರಕಾಶ್‌ ಮನ್‌ ಸಿಂಗ್ ರಾವುತ್ ಅವರು ಸಹಿ ಹಾಕಿದರು.

ಭಾರತದ ಕಾನೂನು ಖಾತೆ ರಾಜ್ಯ ಸಚಿವ ಅರ್ಜುನ್‌ ರಾಮ್‌ ಮೇಘವಾಲ್‌ ಅವರೂ ಉಪಸ್ಥಿತರಿದ್ದರು.

ಉಭಯ ದೇಶಗಳ ನಡುವೆ ನ್ಯಾಯಾಂಗ ಸಹಕಾರ, ಬಾಂಧವ್ಯ ವೃದ್ಧಿ, ಸಾಮರ್ಥ್ಯ ಅಭಿವೃದ್ಧಿ ಹಾಗೂ ತರಬೇತಿ ಕುರಿತಂತೆ ಈ ಒಪ್ಪಂದವು ಸಾಂಸ್ಥಿಕ ಚೌಕಟ್ಟನ್ನು ಒದಗಿಸಲಿದೆ ಎಂದು ಇಲ್ಲಿನ ಭಾರತೀಯ ರಾಯಭಾರ ಕಚೇರಿಯು ಮಾಹಿತಿ ನೀಡಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries