ಮಧೂರು : ಇತಿಹಾಸ ಪ್ರಸಿದ್ಧ ಮಧೂರು ಶ್ರೀಮದನಂತೇಶ್ವರ ಸಿದ್ಧಿವಿನಾಯಕ ಕ್ಷೇತ್ರದಲ್ಲಿ ನಡೆಯುತ್ತಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ಒಂದು ಕಿಲೋ ಚಿನ್ನ, ಬೆಳ್ಳಿ ಹಾಗೂ ತಾಮ್ರಗಳ ಸಹಸ್ರ ಕಲಶಗಳನ್ನು ಕ್ಷೇತ್ರಕ್ಕೆ ವಿಶೇಷ ಮೆರವಣಿಗೆಯೊಂದಿಗೆ ಕರೆ ತರಲಾಯಿತು. ಬ್ರಹ್ಮಕಲಶೋತ್ಸವದ 6ನೇ ದಿನವಾದ ಮಂಗಳವಾರ ಬೆಳಗ್ಗೆ ನಡೆದ ಈ ಅತ್ಯಾಪೂರ್ವ ಕ್ಷಣವನ್ನು ಹಲವರು ಭಕ್ತರು ಕಣ್ಮನಗಳಲ್ಲಿ ತುಂಬಿಕೊಳ್ಳುವಲ್ಲಿ ಸಾಕ್ಷಿಯಾದರು.
ಮಾಣಿಲ ಶ್ರೀಧಾಮದ ಶ್ರೀಶ್ರೀಮೋಹನದಾಸ ಸ್ವಾಮಿಜಿಯವರ ನೇತೃತ್ವದಲ್ಲಿ ಕಲಶ ಮೆರವಣಿಗೆ ನೆರವೇರಿತು.





