ಕಾಸರಗೋಡು: ಎರಡನೇ ಪಿಣರಾಯಿ ವಿಜಯನ್ ಸರ್ಕಾರದ 4ನೇ ವರ್ಷಾಚರಣೆಯ ಹಿನ್ನೆಲೆಯಲ್ಲಿ ಕಾಸರಗೋಡಿನಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಉದ್ಘಾಟನಾ ಸಮಾರಂಭದಲ್ಲಿ ಮೈ ಕೇರಳ ಪ್ರದರ್ಶನ ಮತ್ತು ಮಾರುಕಟ್ಟೆ ಮೇಳದ ಪ್ರಚಾರಾರ್ಥ ಜಿಲ್ಲಾ ವಾರ್ತಾ ಮತ್ತು ಮಾಹಿತಿ ಕಚೇರಿ ವತಿಯಿಂದ ತಯಾರಿಸಲಾದ ರೀಲ್ಸ್ವಿಡಿಯೋವನ್ನು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾರದ ಮುರಳೀಧರನ್ ಬಿಡುಗಡೆಗೊಳಿಸಿದರು.
ಕಾಸರಗೋಡಿನ ಸಾಂಸ್ಕøತಿಕ ವೈವಿಧ್ಯತೆ, ಅಭಿವೃದ್ಧಿ ಮತ್ತು ಭಾಷಾ ವೈವಿಧ್ಯತೆಯನ್ನು ಅನಾವರಣಗೊಳಿಸುವ ಮೂಲಕ ಸರ್ಕಾರದ ವಾರ್ಷಿಕ ಆಚರಣೆಗೆ ಎಲ್ಲರನ್ನು ಆಹ್ವಾನಿಸುವ ರೀತಿಯಲ್ಲಿ ರೀಲ್ಸ್ವಿಡಿಯೋ ತಯಾರಿಸಲಾಗಿದೆ. ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್, ಎಲ್ಎಸ್ಜಿಡಿ ಜೆಡಿ ಜಿ.ಸುಧಾಕರನ್, ಜಿಲ್ಲಾ ವಾರ್ತಾ ಅಧಿಕಾರಿ ಎಂ. ಮಧುಸೂದನನ್ ಉಪಸ್ಥಿತರಿದ್ದರು. ಕಾಸರಗೋಡು ಜಿಲ್ಲೆಯನ್ನು ಕಸ ಮುಕ್ತ ಕೇರಳ ಎಂದು ಘೋಷಿಸುವ ಸಮಾರಂಭದ ವೇದಿಕೆಯಲ್ಲಿ ಬಿಡುಗಡೆ ಸಮಾರಂಭ ಆಯೋಜಿಸಲಾಗಿತ್ತು.
ಪ್ರದರ್ಶನ ಮತ್ತು ಮಾರುಕಟ್ಟೆ ಮೇಳವು 2025ರ ಏಪ್ರಿಲ್ 21 ರಿಂದ 27 ರವರೆಗೆ ಪಿಲಿಕೋಡ್ ಕಾಲಿಕಡವ್ ಮೈದಾನದಲ್ಲಿ ನಡೆಯಲಿದೆ. 21 ರಂದು ಬೆಳಗ್ಗೆ 10ಕ್ಕೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರಾಜ್ಯ ಮಟ್ಟದ ಉದ್ಘಾಟನೆ ನೆರವೇರಿಸಲಿದ್ದಾರೆ. ಏಪ್ರಿಲ್ 21 ರಂದು ಬೆಳಗ್ಗೆ 11ರಂದು ಪಡನ್ನಕ್ಕಾಡ್ ಬೇಕಲ್ ಕ್ಲಬ್ನಲ್ಲಿ ಜಿಲ್ಲೆಯ ವಿವಿಧ ಕ್ಷೇತ್ರಗಳ ಪ್ರಮುಖರೊಂದಿಗೆ ಮುಖ್ಯಮಂತ್ರಿ ಸಂವಾದ ನಡೆಸಲಿದ್ದಾರೆ. ಒಂಬತ್ತು ವರ್ಷಗಳ ಸರ್ಕಾರ ಮೇಳದಲ್ಲಿ ವಿಷಯಾಧಾರಿತ ಮಂಟಪಗಳು, ಮಾರುಕಟ್ಟೆ ಮಳಿಗೆಗಳು, ಫುಡ್ ಕೋರ್ಟ್ ಮತ್ತು ದೈನಂದಿನ ಕಲಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.





