ಪಾಲಕ್ಕಾಡ್: ರಾಜ್ಯದಲ್ಲಿ ಕಾಡಾನೆ ದಾಳಿಗೆ ಮತ್ತೊಂದು ಮೃತ್ಯು ವರದಿಯಾಗಿದೆ. ಪಾಲಕ್ಕಾಡ್ನ ಎಡತನಟ್ಟುಕರ ಎಂಬಲ್ಲಿ ಟ್ಯಾಪಿಂಗ್ ಕಾರ್ಮಿಕ ಉಮರ್ ವಾಲ್ಪರಂಬನ್ ಮೃತಪಟ್ಟಿದ್ದಾರೆ.
ಈ ಪ್ರದೇಶದಲ್ಲಿ ವನ್ಯಜೀವಿಗಳ ಆಕ್ರಮಣ ಹೆಚ್ಚಾಗಿದ್ದು, ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಸೋಮವಾರ ಬೆಳಿಗ್ಗೆ ಉಮರ್ಟೇಪಿಂಗ್ಗೆ ತೆರಳಿದ್ದಾಗ ಕಾಡಾನೆ ದಾಳಿ ಸಂಭವಿಸಿದೆ. ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡ ಪ್ರದೇಶದಲ್ಲಿ ಈ ದಾಳಿ ನಡೆದಿದೆ. ಬಹಳ ಹೊತ್ತುಗಳಿಂದ ಕಾಣೆಯಾಗಿದ್ದ ಉಮರ್ ಅವರ ಕುಟುಂಬದವರು ನಡೆಸಿದ ಹುಡುಕಾಟದಲ್ಲಿ ಮೃತದೇಹ ಸಂಜೆ ಪತ್ತೆಯಾಗಿದೆ. ಅವರ ಮುಖ ಮತ್ತು ತಲೆಗೆ ಗಂಭೀರ ಗಾಯಗಳಾಗಿವೆ.
ಪಾಲಕ್ಕಾಡ್ನಲ್ಲಿ ಕಾಡಾನೆ ದಾಳಿಗೆ ಟ್ಯಾಪಿಂಗ್ ಕಾರ್ಮಿಕ ಮೃತ್ಯು
0
ಮೇ 20, 2025
Tags




