HEALTH TIPS

ಬಿಜೆಪಿ ಜಿಲ್ಲಾ ಅಧ್ಯಕ್ಷಗೆ ಘೆರಾವು ಹಾಕಿದ ಬಿಜೆಪಿ ಕಾರ್ಯಕರ್ತರು- ಪೈವಳಿಕೆ ಪಂಚಾಯತ್ ಕಾರ್ಯಕರ್ತರ ಕಾರ್ಯಾಗಾರ ರದ್ದು

ಉಪ್ಪಳ: ಪೈವಳಿಕೆ ಸಜಂಕಿಲದಲ್ಲಿ ಬಿಜೆಪಿ ಕಾರ್ಯಕರ್ತರ ಕಾರ್ಯಾಗಾರ  ಕಾರ್ಯಕರ್ತರ ಆಕ್ರೋಶದಿಂದ ರದ್ದಾಗಿದ್ದು ಬಿಜೆಪಿ ಹಾಗೂ ಯುವಮೋರ್ಚಾ ಕಾರ್ಯಕರ್ತರು ಬಿಜೆಪಿ ಜಿಲ್ಲಾ ಅಧ್ಯಕ್ಷೆಯನ್ನು ಘೆರಾವು ಮಾಡಿ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು ಎಂದು ವರದಿಯಾಗಿದೆ.
ಪೈವಳಿಕೆ ಪಂಚಾಯತ್ ಬಿಜೆಪಿ ನೇತಾರ ಬಿಜೆಪಿ ಮಂಡಲ ಸಮಿತಿ ಸದಸ್ಯ ಕೆ.ಪಿ. ಪ್ರಶಾಂತ್ ಅವರನ್ನು ಇಲ್ಲದ ಅಧಿಕಾರ ಉಪಯೋಗಿಸಿ, ತನಿಖೆ ನಡೆಸದೆ ಏಕಧಿಪತ್ಯದಂತೆ ಅಮಾನತು ಮಾಡಿರುವ ಬಿಜೆಪಿ ಜಿಲ್ಲಾ ಅಧ್ಯಕ್ಷೆಯ ತೀರ್ಮಾನವನ್ನು ಖಂಡಿಸಿ ಕಾರ್ಯಕರ್ತರು ಘೆರಾವು ನಡೆಸಿದರು. ಈ ಹಿನ್ನೆಲೆಯಲ್ಲಿ ಉದ್ದೇಶಿಸಿದ್ದ ಬಿಜೆಪಿ ಪೈವಳಿಕೆ ಪಂಚಾಯತಿ ಮಟ್ಟದ ಕಾರ್ಯಕರ್ತರ ಕಾರ್ಯಾಗಾರ ರದ್ದು ಮಾಡಲಾಗಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ.
ಬಿಜೆಪಿ ಕಾರ್ಯಕರ್ತರ ಪಕ್ಷ. ನೇತಾರರರಿಗೆ ತಮ್ಮ ಇಷ್ಟದಂತೆ ವರ್ತಿಸಲು ಇರುವ ವೇದಿಕೆಯಲ್ಲ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಜಿಲ್ಲಾ ಪ್ರ.ಕಾರ್ಯದರ್ಶಿಯನ್ನು ಕಾರ್ಯಕರ್ತರು ತರಾಟೆಗೆ ತೆಗೆದ ವಿಚಾರವು ತಿಳಿದು ಬಂದಿದೆ.
ಕಾರ್ಯಕರ್ತರುಗಳನ್ನು ಅಮಾನತು ಮಾಡಿದ ವಿಚಾರ ಇತ್ಯರ್ಥ ಕೂಡಲೇ ಮಾಡಬೇಕು, ಅಮಾನತು ವಾಪಾಸ್ ಪಡೆಯಬೇಕು ಎಂದು ಕಾರ್ಯಕರ್ತರು ಅಗ್ರಹಿಸಿದರು.
ಪಕ್ಷ ಸರ್ವ ಕಾರ್ಯಕರ್ತರ ತ್ಯಾಗ ಮತ್ತು ಸಮರ್ಪಣೆಯ ಪ್ರತೀಕ. ಮೊನ್ನೆ ಮೊನ್ನೆ ಪಕ್ಷಕ್ಕೆ ಸೇರಿ ಜಿಲ್ಲಾ ಅಧ್ಯಕ್ಷರ ಕೊಡುಗೆ ಏನು ಎಂದು ಕಾರ್ಯಕರ್ತರು ರೋಷ ವ್ಯಕ್ತಪಡಿಸಿರುವುದಾಗಿ ತಿಳಿದುಬಂದಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries