HEALTH TIPS

ಕಾಶ್ಮೀರ ಪ್ರವಾಸೋದ್ಯಮ ಪುನಶ್ಚೇತನಕ್ಕೆ ಶಿಕಾರ ರೇಸ್‌

ಶ್ರೀನಗರ: ಪಹಲ್ಗಾಮ್‌ ದಾಳಿ ಬಳಿಕ ಕುಸಿತಗೊಂಡಿರುವ ಜಮ್ಮು-ಕಾಶ್ಮೀರದ ಪ್ರವಾಸೋದ್ಯಮವನ್ನು ಪುನಶ್ಚೇತನಗೊಳಿಸುವ ಭಾಗವಾಗಿ ಬುಧವಾರ ಸುಪ್ರಸಿದ್ಧ ದಾಲ್‌ ಸರೋವರದಲ್ಲಿ ಶಿಕಾರ ರೇಸ್‌ ಆಯೋಜಿಸಲಾಗಿತ್ತು. 

ಚಂಡೀಗಢ ಮೂಲದ ಖಾಸಗಿ ಕಾಲೇಜುಗಳ ಕೆಲವು ಗುಂಪುಗಳು ಸೇರಿ ಈ ಕಾರ್ಯಕ್ರಮ ಆಯೋಜಿಸಿದ್ದವು‌.

ಜಮ್ಮು-ಕಾಶ್ಮೀರ ಶಿಕ್ಷಣ ಸಚಿವೆ ಸಕೀನಾ ಇಟೂ ಅವರು ರೇಸ್‌ಗೆ ಚಾಲನೆ ನೀಡಿದರು‌.

ಕಾರ್ಯಕ್ರಮ ಆಯೋಜಿಸಿದ ವಿದ್ಯಾರ್ಥಿಗಳು ಹಾಗೂ ಶಿಕ್ಷಣ ಸಂಸ್ಥೆಗಳ ಆಡಳಿತ ಸಿಬ್ಬಂದಿಯನ್ನು ಶ್ಲಾಘಿಸಿದ ಸಕೀನಾ,' ಇದು ಬರೀ ರೇಸ್‌ ಅಲ್ಲ. ಶಾಂತಿ, ಏಕತೆ ಹಾಗೂ ಜಮ್ಮು-ಕಾಶ್ಮೀರದ ಅವರ್ಣೀಯ ಚೆಲುವಿನ ಸಂಭ್ರಮ' ಎಂದು ಬಣ್ಣಿಸಿದರು.

ಪಹಲ್ಗಾಮ್‌ನಲ್ಲಿ ಏಪ್ರಿಲ್‌ 22ರಂದು ನಡೆದಿದ್ದ ಭಯೋತ್ಪಾದಕ ದಾಳಿಯಲ್ಲಿ 26 ಮಂದಿ ಮೃತಪಟ್ಟಿದ್ದರು. ಇದು ಪ್ರವಾಸಿಗರಲ್ಲಿ ಭೀತಿ ಹುಟ್ಟಿಸಿದ್ದು, ಪರಿಣಾಮ ಕಣಿವೆ ರಾಜ್ಯದ ಪ್ರವಾಸೋದ್ಯಮಕ್ಕೂ ಪೆಟ್ಟು ಬಿದ್ದಿತ್ತು. ಪ್ರವಾಸೋದ್ಯಮ ಪುನಶ್ಚೇತನಕ್ಕೆ ಸ‌‌‌ರ್ಕಾರ ವಿವಿಧ ಕ್ರಮ ಕೈಗೊಂಡಿರುವಂತೆಯೇ ಶಿಕಾರ ರೇಸ್‌ ಆಯೋಜನೆಗೊಂಡಿರುವುದು ಗಮನಾರ್ಹ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries