HEALTH TIPS

ಪಾಕಿಸ್ಥಾನದ ರಹಸ್ಯ ಕ್ಷಿಪಣಿ ಅಭಿವೃದ್ಧಿ ಬಯಲಿಗೆಳೆದ ಹಣಕಾಸು ಕಾರ್ಯಪಡೆ

ನವದೆಹಲಿ: ಪಾಕಿಸ್ಥಾನದಲ್ಲಿ ರಹಸ್ಯವಾಗಿ ನಡೆಯುತ್ತಿದ್ದ ಖಂಡಾಂತರ ಕ್ಷಿಪಣಿ ಅಭಿವೃದ್ಧಿ ಕಾರ್ಯಕ್ರಮವನ್ನು ಹಣ ಕಾಸು ಕಾರ್ಯಪಡೆ ಬಯಲಿಗೆಳೆದಿದೆ. ಪಾಕಿ ಸ್ಥಾನಕ್ಕೆ ಸರಕು ಹೊತ್ತೂಯ್ಯುತ್ತಿದ್ದ ಹಡಗನ್ನು 2020ರಲ್ಲಿ ಭಾರತೀಯ ಪಡೆಗಳು ಪರಿಶೀಲನೆ ನಡೆಸಿದಾಗ ಕ್ಷಿಪಣಿ ತಯಾರಿಕೆಗೆ ಬೇಕಾದ ಸಾಧನಗಳು ಲಭಿಸಿದ್ದನ್ನು ಎಫ್‌ಎಟಿಎಫ್ ತನ್ನ ವರದಿಯಲ್ಲಿ ಉಲ್ಲೇಖೀಸಿದೆ.

ಚೀನದಿಂದ ಪಾಕಿಸ್ಥಾನಕ್ಕೆ ಈ ಹಡಗು ಹೊರಟಿತ್ತು. ಈ ಬಗ್ಗೆ ಪಾಕಿಸ್ಥಾನ ಸುಳ್ಳು ಹೇಳಿದ್ದರೂ ಬಳಿಕ ಕ್ಷಿಪಣಿ ತಯಾರಿಕೆಗೆ ಬಳಸಬಹುದಾದ ಸಾಧನಗಳನ್ನು ಪಾಕಿಸ್ಥಾನ ಆಮದು ಮಾಡಿಕೊಳ್ಳುತ್ತಿತ್ತು ಎಂದು ತಿಳಿದುಬಂದಿತ್ತು. ಉಗ್ರವಾದ ಪೋಷಿಸಲು ಧನ ಸಹಾಯ ನೀಡಿದ ಆರೋಪದಲ್ಲಿ ಎಫ್‌ಎಟಿಎಫ್ನಿಂದಲೇ ಈ ಹಿಂದೆ ಬೂದು ಪಟ್ಟಿಗೆ ಪಾಕಿಸ್ಥಾನವು ಸೇರ್ಪಡೆಯಾಗಿತ್ತು.

ಪ್ರಸ್ತುತ ಪಹಲ್ಗಾಮ್‌ ಉಗ್ರ ದಾಳಿಯಲ್ಲಿ ಪಾಕಿಸ್ಥಾನದ ಪಾತ್ರದ ಬಗ್ಗೆ ಎಫ್‌ಎಟಿಎಫ್ನಿಂದ ತನಿಖೆ ನಡೆಯುತ್ತಿದೆ. ಹೀಗಾಗಿ ಈ ವರದಿಯ ಆಧಾರದಲ್ಲಿ ಪಾಕಿಸ್ಥಾನವನ್ನು ಬೂದು ಪಟ್ಟಿಗೆ ಮತ್ತೆ ಸೇರ್ಪಡೆಗೊಳಪಡಿಸಿ, ಆರ್ಥಿಕ ನಿರ್ಬಂಧಗಳನ್ನು ಹೇರುವಂತೆ ಆರ್ಥಿಕ ಕಾರ್ಯಪಡೆಗೆ ಭಾರತ ಒತ್ತಾಯಿಸಬಹುದು ಎಂದು ಮೂಲಗಳು ತಿಳಿಸಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries