HEALTH TIPS

ಯಕ್ಷಬಳಗ ಹೊಸಂಗಡಿ: ಕರೋಳು ದೇರಣ್ಣ ರೈ ಸಂಸ್ಮರಣೆ

ಮಂಜೇಶ್ವರ: ಯಕ್ಷಬಳಗ ಹೊಸಂಗಡಿ ಇದರ ಆಷಾಡ ಮಾಸದ ಸರಣಿ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮದಲ್ಲಿ ಕರ್ನಾಟಕ ಯಕ್ಷಗಾನ ಅಕಾಡಮಿಯ ಸಹಯೋಗದೊಂದಿಗೆ  ಪ್ರಸಿದ್ಧ ವೇಷಧಾರಿಯಾಗಿದ್ದ ಕರೋಳು ದೇರಣ್ಣ ರೈಯವರ ಸಂಸ್ಮರಣೆ ನಡೆಯಿತು. 

ಯೋಗೀಶ್ ಧರ್ಮಮಾರ್ ಅವರು ಸಂಸ್ಮರಣ ಭಾಷಣ ಮಾಡಿದರು. ವೆದಮೂರ್ತಿ ರಾಮದಾಸ ಆಚಾರ್ಯರವರು ದೀಪಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮೀಂಜ ಗ್ರಾಮಪಂಚಾಯತಿ ಅಧ್ಯಕ್ಷೆ ಸುಂದರಿ ಆರ್ ಶೆಟ್ಟಿ ಆಧ್ಯಕ್ಷತೆ ವಹಿಸಿದ್ದರು. ವೇದಮೂರ್ತಿ ರಾಮಪ್ರಸಾದ ನಲ್ಲೂರಾಯ ಹಾಗು ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಸತೀಶ್ ಅಡಪ ಸಂಕಬೈಲು ಶುಭ ಹಾರೈಸಿದರು. ನಾಗರಾಜ ಪದಕಣ್ಣಾಯ ಮೂಡಂಬೈಲು ಸ್ವಾಗತಿಸಿ, ವಕೀಲ ವಿಠಲ ಭಟ್ ಮೊಗಸಾಲೆ ವಂದಿಸಿದರು. 

ಸಂಸ್ಮರಣಾ ಕಾರ್ಯಕ್ರಮದ ಬಳಿಕ ಭಿಷ್ಮವಿಜಯ ಪ್ರಸಂಗದ ತಾಳಮದ್ದಳೆ ಜರಗಿತು. ರತ್ನಾಕರ ಆಳ್ವ ತಲಪಾಡಿ ಭಾಗವತರಾಗಿ, ರಾಜಾರಾಮ ಬಲ್ಲಾಳ್ ಮತ್ತು ಹರಿಶ್ಚಂದ್ರ ನಾಯ್ಗ  ಚೆಂಡೆಮದ್ದಳೆಯಲ್ಲಿ ಸಹಕರಿಸಿದರು. ಮುಮ್ಮೇಳದಲ್ಲಿ ವಕೀಲ ಮುರಳೀಧರ ಬಳ್ಳಕ್ಕುರಾಯ, ಶಂಕರ ಆಚಾರ್ಯ ಕೋಳ್ಯೂರು, ನಾಗರಾಜ ಪದಕಣ್ಣಾಯ ಮೂಡಂಬೈಲು, ರಾಜಾರಾಮ ರಾವ್ ಮೀಯಪದವು ಭಾಗವಹಿಸಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries