HEALTH TIPS

ಧನಕರ್‌ಗೆ ಬೀಳ್ಕೊಡುಗೆ ನೀಡಿ ಎಂದ ಕಾಂಗ್ರೆಸ್‌: ಪ್ರತಿಕ್ರಿಯಿಸದ ಕೇಂದ್ರ

ನವದೆಹಲಿ: ಮಾಜಿ ಉಪ ರಾಷ್ಟ್ರಪತಿ ಜಗದೀಪ್‌ ಧನಕರ್‌ ಅವರಿಗಾಗಿ ಬೀಳ್ಕೊಡುಗೆ ಸಮಾರಂಭ ಆಯೋಜಿಸಬೇಕು ಎಂದು ಬುಧವಾರ ಸಂಜೆ ನಡೆದಿದ್ದ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಒತ್ತಾಯಿಸಿದ್ದಾರೆ. ಆದರೆ, ಕೇಂದ್ರ ಸರ್ಕಾರ ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ತಿಳಿದುಬಂದಿದೆ.

'ಸಭೆಯಲ್ಲಿ ಕೇಂದ್ರ ಸಚಿವ ಮತ್ತು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ಸಚಿವ ಕಿರಣ್‌ ರಿಜಿಜು ಹಾಜರಿದ್ದರು. ಆದರೆ, ರಮೇಶ್‌ ಅವರು ಪ್ರಸ್ತಾಪಿಸಿದ ವಿಚಾರಕ್ಕೆ ಸಂಬಂಧಿಸಿ ಈ ಇಬ್ಬರೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ' ಎಂದು ಮೂಲಗಳು ಹೇಳಿವೆ. 'ಜೊತೆಗೆ, ವಿರೋಧ ಪಕ್ಷಗಳ ಇತರೆ ಯಾವ ನಾಯಕರೂ ರಮೇಶ್‌ ಅವರ ಪ್ರಸ್ತಾವವನ್ನು ಬೆಂಬಲಿಸಲಿಲ್ಲ' ಎಂದೂ ತಿಳಿಸಿವೆ.

ರಾಜ್ಯಸಭೆಯ ಒಟ್ಟು ಆರು ಸದಸ್ಯರಿಗೆ ಗುರುವಾರ ಬೀಳ್ಕೊಡುಗೆ ಸಮಾರಂಭವನ್ನು ಆಯೋಜಿಸಲಾಗಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries