ಕಾಸರಗೋಡು: ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಪ್ರತಿಷ್ಠಾನದ ಸಾಂಸ್ಕೃತಿಕ ಭವನದಲ್ಲಿ ತೆಂಕುತಿಟ್ಟು ಯಕ್ಷಗಾನ ಹಿಮ್ಮೇಳ ಕಲಾವಿದರ ಶಿಬಿರ ನಡೆಯಿತು. ತೆಂಕುತಿಟ್ಟು ಯಕ್ಷಗಾನದ ಹಿಮ್ಮೇಳ ಗುರುಗಳಾದ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಉದ್ಘಾಟಿಸಿದರು. ಹಿರಿಯ ಹಿಮ್ಮೇಳ ವಾದಕ ಪದ್ಯಾಣ ಶಂಕರನಾರಾಯಣ ಭಟ್, ಯಕ್ಷಗಾನ ಕ್ಷೇತ್ರದ ಮಹಾಪೆÇೀಷಕ, ಕರ್ನಾಟಕ ಸರ್ಕಾರದ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಟಿ. ಶ್ಯಾಮ ಭಟ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಈ ಸಂದರ್ಭ ಪ್ರತಿಷ್ಠಾನ ವತಿಯಿಂದ ಟಿ. ಶ್ಯಾಮ್ ಭಟ್ ಅವರನ್ನು ವಿಶೇಷವಾಗಿ ಗೌರವಿಸಲಾಯಿತು. ಬಡಗುತ್ತಿಟ್ಟಿನ ಪ್ರಸಿದ್ಧ ಭಾಗವತ, ಕರ್ನಾಟಕ ರಾಜ್ಯ ಪ್ರಶಸ್ತಿ ಪುರಸ್ಕೃತ ಕೊಳಗಿ ಕೇಶವ ಹೆಗಡೆ ಇವರನ್ನು ಗಡಿನಾಡು ಕಾಸರಗೋಡಿನ ಹಿರಿಯ ವಿದ್ವಾಂಸ ಕಲಾವಿದ ಶ್ರೀ ವಿಶ್ವವಿನೋದ ಬನಾರಿ, ಹಿರಿಯ ಭಾಗವತ ಶ್ರೀ ಸರಪಾಡಿ ಶಂಕರನಾರಾಯಣ ಕಾರಂತ ಇವರನ್ನು ಪ್ರತಿಷ್ಠಾನ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭ ನಡೆದ ನೆಡ್ಲೆ ನರಸಿಂಹ ಭಟ್ ಸಂಸ್ಮರಣಾ ಸಮಾರಂಭದಲ್ಲಿ ತೆಂಕುತಿಟ್ಟು ಯಕ್ಷಗಾನದ ಹಿರಿಂiÀ ಕಲಾವಿದ ಸುಣ್ಣಂಬಳ ವಿಶ್ವೇಶ್ವರ ಭಟ್ ಅವರು ನರಸಿಂಹ ಭಟ್ ಕುರಿತಾದ ಸಂಸ್ಮರಣ ಭಾಷಣ ಮಾಡಿದರು.
ಹಿಮ್ಮೆಳ ಶಿಬಿರ ವಿಷಯ ಮಂಡನೆ:
ಪಾತ್ರ ಪ್ರಸ್ತುತಿಯಲ್ಲಿ ಔಚಿತ್ಯ ಪ್ರಜ್ಞೆಯ ಕುರಿತಾಗಿ ರಂಗದಲ್ಲಿ ಕಲಾವಿದ ಯಾವ ರೀತಿ ಪ್ರಸಂಗದೊಳಗಿದ್ದು ಸ್ಪಂದಿಸಬೇಕು ಎಂಬುದನ್ನು ಕಲಾವಿದ ಸುಣ್ಣಂಬಳ ವಿಶ್ವೇಶ್ವರ ಭಟ್ ಸ್ಪುಟುವಾಗಿ ವಿವರಿಸಿದರು. ಬಲಿಪ ಶಿವಶಂಕರ ಭಟ್ ಮತ್ತು ಕೃಷ್ಣ ಪ್ರಕಾಶ್ ಒಳಿತ್ತಾಯ ಇವರು ಪ್ರಸಂಗ ಸಾಹಿತ್ಯದ ಪ್ರಸ್ತುತಿ ಮತ್ತು ಮದ್ದಳೆ ಸಹಯೋಗ ವನ್ನು ಪ್ರಾತ್ಯಕ್ಷಿಕೆ ಮೂಲಕ ನಿರೂಪಿಸಿ ವಿವರಿಸಿದರು. ಮೇಳವೆಂಬ ಸಮೂಹ ವ್ಯವಸ್ಥೆಯೊಂದಿಗೆ ವೈಯಕ್ತಿಕ ಹೊಂದಾಣಿಕೆ ಕುರಿತಾಗಿ ವಿದ್ವಾಂಸ ಉಜಿರೆ ಅಶೋಕ್ ಭಟ್ ಅವರು ನಿರೂಪಿಸಿದರು. ಪ್ರಸಂಗ ಸಾಹಿತ್ಯ ಪ್ರಸ್ತುತಿಯಲ್ಲಿ ಛಂದಸ್ಸಿನ ಮಹತ್ತ್ವದ ಕುರಿತಾಗಿ ಕಟೀಲು ಮೇಳದ ಪ್ರಧಾನ ಭಾಗವತ ಅಂಡಾಲ ದೇವಿ ಪ್ರಸಾದ ಶೆಟ್ಟಿ, ಧ್ವನಿವರ್ಧಕದ ಸಮರ್ಪಕ ಬಳಕೆಯ ಕುರಿತಾಗಿ ವಿಶ್ರಾಂತ ಆಕಾಶವಾಣಿ ಉದ್ಘೋಷಕ, ಹವ್ಯಾಸಿ ಭಾಗವತ ಸುಬ್ರಾಯ ಸಂಪಾಜೆ, ಪ್ರಸಂಗಗಳ ಸಾಂಪ್ರದಾಯಿಕ ನಡೆ ಬಗ್ಗೆ ಪುಂಡಿಕಾಯಿ ಗೋಪಾಲಕೃಷ್ಣ ಭಟ್, ಕಲಾವಿದನ ಸಾಮಾಜಿಕ ಸಾಂಸ್ಕೃತಿಕ ಜವಾಬ್ದಾರಿ ಕುರಿತಾಘಿ ಉತ್ತರ ಕನ್ನಡ ಜಿಲ್ಲೆಯ ಯಕ್ಷರಂಗ ಮಾಸ ಪತ್ರಿಕೆಯ ಸಂಪಾದಕ ಕಡತೋಕ ಗೋಪಾಲಕೃಷ್ಣ ಭಾಗವತ, ಮದ್ದಲೆಗಾರನ ಸ್ಥಾನ-ಹೊಂದಾಣಿಕೆ ಕುರಿತಾಗಿ ಕೊಂಕನಣಾಜೆ ಚಂದ್ರಶೇಖರ ಭಟ್ ಅವರು ವಿವರಿಸಿದರು.
ಯಕ್ಷಗಾನದ ಹಿರಿಯ ಕಲಾವಿದರಾದ ವಾಸುದೇವರಂಗ ಭಟ್ ಮಧೂರು, ರಮೇಶ್ ಭಟ್ ಪುತ್ತೂರು, ಡಾ.ಸತ್ಯನಾರಾಯಣ ಪುಣಿಚಿತ್ತಾಯ ಪೆರ್ಲ, ಡಾ.ಸತೀಶ್ ಪುಂಚಿತ್ತಾಯ ಉಪಸ್ಥಿತರಿದ್ದರು. ಡಾ. ಸುಣ್ಣಂಗಳ ಕೃಷ್ಣ ಭಟ್ ಹಾಗೂ ಎಸ್. ಎನ್. ಭಟ್ ಬಾಯಾರು ಇವರು ಕಾರ್ಯಕ್ರಮವನ್ನು ನಿರೂಪಿಸಿದರು. ರಾದಾಕೃಷ್ಣ ಕಲ್ಚಾರ್ ಕಾರ್ಯಕ್ರಮದ ಅವಲೋಕನ ಮಾಡಿದರು. ಇತ್ತೀಚೆಗೆ ಅಗಲಿದ ಶ್ರೀಗಳಾದ ಪಾತಾಳ ವೆಂಕಟರಮಣ ಭಟ್, ಸದಾಶಿವ ಶೆಟ್ಟಿಗಾರ್ ಸಿದ್ದ ಕಟ್ಟೆ, ಡಾ. ಬಿ.ಎಸ್.ರಾವ್ ಕಾಸರಗೋಡು ಇವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಸಿರಿಬಾಗಿಲು ಪ್ರತಿಷ್ಠಾನದ ಅಧ್ಯಕ್ಷ ರಾಮಕೃಷ್ಣ ಮಯ್ಯ ವಂದಿಸಿದರು. 60ಕ್ಕೂ ಹೆಚ್ಚು ಹಿಮ್ಮೇಳ ಕಲಾವಿದರುಗಳು ಭಾಗವಹಿಸಿದ್ದರು.





