ಮುಳ್ಳೇರಿಯ: ಬೆಳ್ಳೂರು ಕೃಷಿ ಭವನದ ಅಡಿಯಲ್ಲಿ ನೋಂದಾಯಿಸಲಾದ "ನೆಟ್ಟಣಿಗೆ ರೈತ ಮಿತ್ರ" ಕೃಷಿ ಗುಂಪಿನ ಚಟುವಟಿಕೆಯ ಕಾರ್ಯಾರಂಭದ ಭಾಗವಾಗಿ ಕಿನ್ನಿಂಗಾರು ವೆಂಕಪ್ಪ ಮಣಿ ಭಟ್ ಅವರ ಕೊಳಕೆ ಗದ್ದೆಯಲ್ಲಿ ಇತ್ತೀಚೆಗೆ 'ನೇಜಿ ಹಬ್ಬ' ಕಾರ್ಯಕ್ರಮ ಆಯೋಜಿಸಲಾಯಿತು.
ಬೆಳ್ಳೂರು ಗ್ರಾಪಂ ಅಧ್ಯಕ್ಷ ಶ್ರೀಧರ ಎಂ.ಉದ್ಘಾಟಿಸಿದರು. ಉಪಾಧ್ಯಕ್ಷೆ ಗೀತಾ ಕೆ., ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಚಂದ್ರಹಾಸ ರೈ, ಪದ್ಮಶ್ರೀ ಸತ್ಯನಾರಾಯಣ ಬೆಳೇರಿ, ಗದ್ದೆ ಮಾಲೀಕ ವೆಂಕಪ್ಪ ಮಣಿ ಭಟ್, ಬೆಳ್ಳೂರು ಸಹಕಾರಿ ಬ್ಯಾಂಕ್ ನಿರ್ದೇಶಕ ಜಯರಾಜ ರೈ, ಕೃಷಿ ಅಧಿಕಾರಿ ಅದ್ವೈತ್, ಕೃಷಿ ಸಹಾಯಕರು, ಕೃಷಿ ಗುಂಪು ಸದಸ್ಯರು ಭಾಗವಹಿಸಿದ್ದರು. ಕೃಷಿ ಭವನದಲ್ಲಿ ನಡೆದ ಸಭೆಯಲ್ಲಿ 2025-26ನೇ ಸಾಲಿನ ಜನಪರ ಯೋಜನೆಯಡಿ ಭತ್ತ ಕೃಷಿಕರಿಗೆ ಬಿತ್ತನೆ ಬೀಜ ವಿತರಿಸಲಾಯಿತು.





