ಬದಿಯಡ್ಕ: ಸನಾತನ ವಿಶ್ವಾಸ, ಆಚರಣೆಗಳ ಮೇಲೆ ಈಗೀಗ ನಿರಂತರ ಆಕ್ರಮಣಗಳು ವ್ಯಾಪಕವಾಗುತ್ತಿದೆ. ವ್ಯಕ್ತಿಗಳ ಹೆಸರಲ್ಲಿ ನಡೆಸುವ ತೇಜೋವಧೆಗಳ ಮಧ್ಯೆ ದೈವ-ದೇವರುಗಳನ್ನು ಅವಹೇಳನಗೈದು ಹಿಂದೂ ಮನಸ್ಸುಗಳಿಗೆ ನೋವನ್ನುಂಟುಮಾಡುವ ಕುತ್ಸಿತ ಮನೋಭಾವಗಳಿಗೆ ತಕ್ಕ ಉತ್ತರ ನೀಡಬೇಕು. ವ್ಯಕ್ತಿಗಳು ಶಾಶ್ವತರಲ್ಲ. ಆದರೆ ಮೌಲ್ಯಗಳನ್ನುಳಿಸಿಕೊಂಡು ನಂಬಿಕೆ, ಆಚರಣೆ, ಸತ್ಕರ್ಮಗಳಿಗೆ ಬೆಂಬಲ ನೀಡಬೇಕು. ಆರಾಧನಾಲಯಗಳ ಸಂರಕ್ಷಣೆಯಲ್ಲಿ ಎಲ್ಲರೂ ಒಗ್ಗಟ್ಟಿನಿಂದಿರಬೇಕು ಎಂದು ಯುವ ಧಾರ್ಮಿಕ ಮುಂದಾಳು, ಉದ್ಯಮಿ ಮಧುಸೂದನ ಅಯರ್ ಮಂಗಳೂರು ಅಭಿಪ್ರಾಯ ವ್ಯಕ್ತಪಡಿಸಿದರು.
ನೀರ್ಚಾಲು ಸಮೀಪದ ಮಾನ್ಯ ಶ್ರೀ ಅಯ್ಯಪ್ಪ ಭಜನಾ ಮಂದಿರದ ನವೀಕರಣದ ಅಂಗವಾಗಿ ಭಾನುವಾರ ಶ್ರೀಮಂದಿರದ ಪರಿಸರದಲ್ಲಿ ನಡೆದ ಬೆಳ್ಳಿ ಅಭಿಯಾನದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಅವರು ಮಾತನಾಡಿದರು.
ಜೀವನಕ್ರಮ, ಆಹಾರ ವಿಹಾರಗಳು ಭಿನ್ನವಾಗಿದ್ದರೂ ನಮ್ಮ ನಂಬಿಕೆ, ನಂಬುವ ಶಕ್ತಿ ಒಂದೇ ಆಗಿದೆ. ಭಜನಾ ಮಂದಿರದ ಮೂಲಕ ನಮ್ಮಲ್ಲಿ ಒಗ್ಗಟ್ಟು, ದೇವರ ಮೇಲಿನ ಭಕ್ತಿ ಅಚಲಗೊಳ್ಳಬೇಕು ಎಂದವರು ತಿಳಿಸಿದರು.
ಶ್ರೀಮಂದಿರದ ಶ್ರೀಅಯ್ಯಪ್ಪ ಸೇವಾ ಸಂಘದ ಅಧ್ಯಕ್ಷ ನಾರಾಯಣ ಮಣಿಯಾಣಿ ಮಾನ್ಯ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಉದ್ಯಮಿ ಗೋಪಾಲಕೃಷ್ಣ ಪೈ ಬದಿಯಡ್ಕ ಅವರು ಪ್ರಥಮ ಬೆಳ್ಳಿ ಸಮರ್ಪಣೆಗೈದು ಉದ್ಘಾಟಿಸಿ ಮಾತನಾಡಿ, ಸಮಷ್ಠಿಯ ಭಕ್ತಿ ದ್ಯೋತಕವಾದ ಭಜನೆಯಿಂದ ಮೈ-ಮನಗಳು ಬೆಳಗುತ್ತದೆ. ಶ್ರೀಅಯ್ಯಪ್ಪ ಸ್ವಾಮಿಯ ತತ್ವಮಸಿ ತತ್ವದಡಿ ನಮ್ಮನ್ನು ನಾವೇ ಉದ್ಧರಿಸಿ ಉತ್ತಮ ವ್ಯಕ್ತಿಗಳಾಗಿ ಸಮಾಜದಲ್ಲಿ ಮುನ್ನಡೆಯಲು ಭಗವದನುಗ್ರವೂ ಅಗತ್ಯ. ಮಾನ್ಯ ಅಯ್ಯಪ್ಪ ಭಜನಾ ಮಂದಿರ ಕ್ರಿಯಾತ್ಮಕವಾಗಿ ಪ್ರಗತಿ ಸಾಧಿಸುತ್ತಿರುವುದು ಸ್ತುತ್ಯರ್ಹ ಎಂದರು.
ಗುರುಸ್ವಾಮಿ ಶಂಕರ ದೇವಾಂಗ ಗೌರವ ಉಪಸ್ಥಿತರಿದ್ದು ಮಾತನಾಡಿದರು. ಅಯ್ಯಪ್ಪ ಸೇವಾ ಸಂಘದ ಗೌರವಾಧ್ಯಕ್ಷ ಮಾನ ಮಾಸ್ತರ್ ಮಾನ್ಯ, ಗುರುಸ್ವಾಮಿ ಕುಂಞಪ್ಪ ನಾಯ್ಕ ದೇವರಕೆರೆ, ನಾರಾಯಣ ಗುರುಸ್ವಾಮಿ ನಾರಾಯಣಮಂಗಲ, ನಾರಾಯಣ ಮಾಸ್ತರ್ ಚರ್ಲಡ್ಕ, ಕುಂಞÂಕಣ್ಣ ಮಣಿಯಾಣಿ, ನ್ಯಾಯವಾದಿ ರವಿ ಮರ್ದಂಬೈಲು, ವೇಣುಗೋಪಾಲ ತತ್ವಮಸಿ, ಪಿ.ಎಂ.ವೆಂಕಪ್ಪ ನಾಯ್ಕ, ರಾಮ ಕಾರ್ಮಾರು, ಸಂತೋಷ್ ಕುಮಾರ್ ಎಸ್. ಮಾನ್ಯ ಶುಭಾಶಂಸನೆಗೈದರು. ಶ್ರೀಅಯ್ಯಪ್ಪ ಸೇವಾ ಸಂಘದ ಕಾರ್ಯದರ್ಶಿ ಕೆ.ಶ್ಯಾಮಪ್ರಸಾದ್ ಮಾನ್ಯ ಸ್ವಾಗತಿಸಿ,ಗೋಪಾಲ ಪಟ್ಟಾಜೆ ವಂದಿಸಿದರು. ಸುಂದರ ಶೆಟ್ಟಿ ಕೊಲ್ಲಂಗಾನ ಕಾರ್ಯಕ್ರಮ ನಿರೂಪಿಸಿದರು. ಮಧುಸೂದನ ಅಯರ್ ಅವರು ಗೋಪಾಲಕೃಷ್ಣ ಪೈ ಅವರಿಗೆ ಬೆಳ್ಳಿ ಸಮರ್ಪಿಸಿ ಚಾಲನೆ ನೀಡಿದರು. ಗೋಪಾಲಕೃಷ್ಣ ಪೈ ಅವರೂ ಸಮರ್ಪನೆಗೈದರು. ಈ ಸಂದರ್ಭ ಹಲವು ಪೌರ ಪ್ರಮುಖರು, ಸ್ಥಳೀಯರು ಬೆಳ್ಳಿ ಸಮರ್ಪಣೆಗೈದರು.




.jpg)
.jpg)
.jpg)
