HEALTH TIPS

ನಾಳೆ ಕ.ಸಾ.ಪ.ದಿಂದ ಸರ್.ಎಂ ವಿಶ್ವೇಶ್ವರಯ್ಯ ಜನ್ಮದಿನಾಚರಣೆ

ಕಾಸರಗೋಡು: ಕನ್ನಡ ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ ಸಂಸ್ಥಾಪಕರಲ್ಲಿ ಒಬ್ಬರಾದ  ಸರ್. ಎಂ ವಿಶ್ವೇಶ್ವರಯ್ಯನವರ 165 ನೇ ಜನ್ಮದಿನಾಚರಣೆಯು ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ಸೆ.15 ರಂದು ಸಂಜೆ 4.30ಕ್ಕೆ ಸೀತಾಂಗೋಳಿಯಲ್ಲಿರುವ ವಕೀಲ  ಥಾಮಸ್ ಡಿ'ಸೋಜರ ಕಛೇರಿ ಕಟ್ಟಡದಲ್ಲಿ ನಡೆಯುವುದು.

ಮುಖ್ಯ ಅತಿಥಿಯಾಗಿರುವ ಸಿರಿಗನ್ನಡ ವೇದಿಕೆಯ ಅಧ್ಯಕ್ಷ, ಸಾಹಿತಿ ವಿ. ಬಿ ಕುಳಮರ್ವ ಅವರು ಸರ್ ಎಂ ವಿಶ್ವೇಶ್ವರಯ್ಯನವರ ಬದುಕು, ವ್ಯಕ್ತಿತ್ವ, ಸಾಧನೆಗಳ ಕುರಿತು ಉಪನ್ಯಾಸ ನೀಡುವರು. ಕ.ಸಾ.ಪ ಗೌರವ ಕಾರ್ಯದರ್ಶಿ ಶೇಖರ ಶೆಟ್ಟಿ ಬಾಯಾರು ಅಧ್ಯಕ್ಷತೆ ವಹಿಸುವರು.

ವಕೀಲ, ಸಾಹಿತಿ ಥಾಮಸ್ ಡಿ'ಸೋಜ, ಕ.ಸಾ.ಪ ಪದಾಧಿಕಾರಿಗಳಾದ ರಾಮಚಂದ್ರ ಭಟ್ ಧರ್ಮತ್ತಡ್ಕ, ವಿಶಾಲಾಕ್ಷ ಪುತ್ರಕಳ, ಪ್ರದೀಪ್ ಕುಮಾರ್ ಶೆಟ್ಟಿ ಬೇಳ ಉಪಸ್ಥಿತರಿರುವರು.  



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries