ಕುಂಬಳೆ: ಯುವ ವಕೀಲೆ, ಕುಂಬಳೆ ಸನಿಹದ ಮುಟ್ಟಂ ಬೇರಿಕೆ ನಿವಾಸಿ ಕೃತೇಶ್ ಅವರ ಪತ್ನಿ, ಸಿ. ರಂಜಿತಾ ಕುಮಾರಿ(30)ಆತ್ಮಹತ್ಯೆ ಪ್ರಕರಣದ ನಂತರ ಪರಾರಿಯಾಗಲೆತ್ನಿಸಿದ ಯುವ ವಕೀಲನನ್ನು ಪೊಲೀಸರು ತಿರುವನಂತಪುರದಿಂದ ಸೆರೆಹಿಡಿದ್ದಾರೆ.
ರಂಜಿತಾ ಅವರ ಜೊತೆ ನಿಕಟ ಸಂಪರ್ಕ ಹೊಂದಿದ್ದ ವಕೀಲರೊಬ್ಬರು ತಲೆಮರೆಸಿಕೊಂಡಿರುವುದು ಹಲವು ಊಹಾಪೋಹಗಳಿಗೆ ಕಾರಣವಾಗಿದ್ದು, ಈ ವ್ಯಕ್ತಿಯನ್ನು ವಶಕ್ಕೆ ತೆಗೆದುಕೊಂಡಿರುವ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.
ವಕೀಲೆ ಆತ್ಮಹತ್ಯೆಗೂ ಮೊದಲು ಇವರ ಮೊಬೈಲ್ಗೆ ವ್ಯಕ್ತಿಯೊಬ್ಬರು ವಿಡಿಯೋ ಕರೆ ಮಾಡಿರುವುದನ್ನು ಪೊಲೀಸರು ಪತ್ತೆಹಚ್ಚಿದ್ದು, ಈ ನಿಟ್ಟಿನಲ್ಲಿ ಸಮಗ್ರ ತನಿಖೆ ನಡೆಸುವ ನಿಟ್ಟಿನಲ್ಲಿ ಮೊಬೈಲನ್ನು ಈಗಾಗಲೇ ತಿರುವನಂತಪುರದ ಕೇಂದ್ರ ಫಾರೆನ್ಸಿಕ್ ಲ್ಯಾಬ್ಗೆ ಕಳುಹಿಸಿಕೊಡಲಾಗಿದೆ.

