ಕುಂಬಳೆ: ಕುಂಬಳೆ ಶಾಂತಿಪಳ್ಳ ನಿವಾಸಿ ದಿ. ವಿಜಯನ್ ಎಂಬವರ ಪುತ್ರ, ಕೂಲಿ ಕಾರ್ಮಿಕ ವಿನಯ ಕುಮಾರ್(44)ಅವರ ಮೃತದೇಹ ಮನೆ ಸನಿಹದ ಹಳೇ ಮರದ ಕಾರ್ಖಾನೆಯ ಕೊಠಡಿಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಭಾನುವಾರ ರಾತ್ರಿ 10ರಿಂದ ಇವರು ಮನೆಯಿಂದ ನಾಪತ್ತೆಯಾಗಿದ್ದು, ಈ ಬಗ್ಗೆ ಮನೆಯವರು ನೀಡಿದ ದೂರಿನನ್ವಯ ಕುಂಬಳೆ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ಮನೆಯವರು, ಸ್ನೇಹಿತರು ಹಾಗೂ ಪೊಲೀಸರು ಹುಡುಕಾಟ ನಡೆಸುವ ಮಧ್ಯೆ, ಮನೆಯಿಂದ ಅನತಿ ದೂರದಲ್ಲಿ ಈ ಹಿಂದೆ ಕಾರ್ಯಾಚರಿಸುತ್ತಿದ್ದ ಹಳೇ ಮರದ ಕಾರ್ಖಾನೆಯ ಕೊಠಡಿಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿಪತ್ತೆಯಾಗಿದ್ದರು. ತಕ್ಷಣ ಕೆಳಗಿಳಿಸಿ ಕುಂಬಳೆಯ ಆಸ್ಪತ್ರೆಗೆ ದಾಖಲಿಸಿರೂ ಪ್ರಯೋಜನವಾಗಿರಲಿಲ್ಲ.




