ಮಂಜೇಶ್ವರ: ಕೇರಳ-ಕರ್ನಾಟಕ ಗಡಿ ಪ್ರದೇಶವಾದ ತೂಮಿನಾಡಿನಿಂದ ಎಸ್.ಐ.ಆರ್. ಪರಿಷ್ಕರಣೆಗೆ ಅಧಿಕೃತ ಚಾಲನೆ ನೀಡಲಾಗಿದೆ. ಸ್ಥಳೀಯ ಹಿರಿಯ ಪತ್ರಕರ್ತ ಅಬ್ದುಲ್ ರಹ್ಮಾನ್ ಉದ್ಯಾಪರ ಅವರಿಗೆ ಬೂತ್ ಮಟ್ಟದ ಅಧಿಕಾರಿ ಹರಿಣಾಕ್ಷಿ ಫಾರಂ ಹಸ್ತಾಂತರಿಸುವ ಮೂಲಕ ಈ ಪ್ರಕ್ರಿಯೆಗೆ ಕೇರಳದ ತುದಿಯಿಂದ ಆರಂಭಿಸಲಾಯಿತು.
ಈ ಸಂದರ್ಭದಲ್ಲಿ ಅಧಿಕಾರಿಗಳು ಮತದಾರರ ಪಟ್ಟಿಯ ನಿಖರತೆ ಮತ್ತು ನವೀಕರಣದ ಅಗತ್ಯವನ್ನು ಒತ್ತಿ ಹೇಳಿದರು. ಪ್ರತಿ ಅರ್ಹ ನಾಗರಿಕರೂ ತಮ್ಮ ಹೆಸರು, ವಿಳಾಸ ಮತ್ತು ಇತರೆ ವಿವರಗಳನ್ನು ಪರಿಶೀಲಿಸಿ ತಿದ್ದುಪಡಿ ಮಾಡುವಂತೆ ಮನವಿ ಮಾಡಿದರು.
ಎಸ್.ಐ.ಆರ್. ಪರಿಷ್ಕರಣೆಯು ಪ್ರಜಾಪ್ರಭುತ್ವದ ಮೂಲಾಧಾರವಾದ ಮತದಾರರ ಪಟ್ಟಿಯನ್ನು ನಿಖರಗೊಳಿಸುವ ಪ್ರಯತ್ನವಾಗಿದ್ದು, ತೂಮಿನಾಡಿನಲ್ಲಿ ಪ್ರಾರಂಭವಾದ ಈ ಕಾರ್ಯ ರಾಜ್ಯದಾದ್ಯಂತ ಹಂತ ಹಂತವಾಗಿ ಮುಂದುವರಿಯಲಿದೆ. ಈ ಸಂದರ್ಭ ಬೂತ್ ಮಟ್ಟದ ಸಹಾಯಕಿ ಮುಂತಾಸ್ ಸಮೀರ, ಸಿಬ್ಬಂದಿಗಳಾದ ವಿನುತ, ನವ್ಯ, ವಾಣಿ ಮೊದಲಾದವರು ಜೊತೆಗಿದ್ದರು.




.jpg)
