HEALTH TIPS

ಕೊಚ್ಚಿ ನಂತರ ತಿರುವನಂತಪುರಂನಲ್ಲಿ ಮೆಟ್ರೋ: ರಾಜಧಾನಿ ಮೆಟ್ರೋ ಮಾರ್ಗದ ಜೋಡಣೆಗೆ ಸರ್ಕಾರ ಅನುಮೋದನೆ

ತಿರುವನಂತಪುರಂ: ಕೊಚ್ಚಿಯ ಬಳಿಕ ತಿರುವನಂತಪುರಂನಲ್ಲೂ ಮೆಟ್ರೋ ಮಾರ್ಗವನ್ನು ರಚಿಸುವ ಬಗ್ಗೆ ಸಿದ್ದತೆ ನಡೆರದಿದೆ. ತಿರುವನಂತಪುರಂನಲ್ಲಿ ಲಘು ಮೆಟ್ರೋಗಾಗಿ ಯೋಜನಾ ದಾಖಲೆಯನ್ನು ಸರ್ಕಾರ ಅನುಮೋದಿಸಿದೆ. 


ಮೆಟ್ರೋ ತಿರುವನಂತಪುರಂ ನಗರದ ಚರ್ಯೆಯನ್ನೇ ಬದಲಾಯಿಸಲಿದೆ. ತಿರುವನಂತಪುರಂ ಮೆಟ್ರೋ ರೈಲು ಯೋಜನೆಯ ಮೊದಲ ಹಂತದ ಜೋಡಣೆಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅನುಮೋದನೆ ನೀಡಿದ್ದಾರೆ. ಟೆಕ್ನೋಪಾರ್ಕ್, ವಿಮಾನ ನಿಲ್ದಾಣ, ತಂಬಾನೂರು ಬಸ್ ನಿಲ್ದಾಣ, ರೈಲು ನಿಲ್ದಾಣ, ಸಚಿವಾಲಯ ಮತ್ತು ವೈದ್ಯಕೀಯ ಕಾಲೇಜಿನ ಮೂರು ಹಂತಗಳನ್ನು ಸಂಪರ್ಕಿಸುವ ಮೊದಲ ಹಂತದ ಜೋಡಣೆಯನ್ನು ಅನುಮೋದಿಸಲಾಗಿದೆ. ಈ ಯೋಜನೆಯನ್ನು ಕೊಚ್ಚಿ ಮೆಟ್ರೋ ರೈಲು ಲಿಮಿಟೆಡ್ ಮೂಲಕ ಕಾರ್ಯಗತಗೊಳಿಸಲಾಗುವುದು. 


ಇದು ಪಪ್ಪನಂಕೋಡ್‍ನಿಂದ ಪ್ರಾರಂಭವಾಗಿ ಕಿಲ್ಲಿಪಲ್ಲಂ, ಪಳಯಂ, ಶ್ರೀಕಾರ್ಯಂ, ಕಜಕೂಟಂ, ಟೆಕ್ನೋಪಾರ್ಕ್, ಕೊಚುವೇಲಿ ಮತ್ತು ವಿಮಾನ ನಿಲ್ದಾಣದ ಮೂಲಕ ಇಂಚಕಲ್ಲ್‍ನಲ್ಲಿ ಕೊನೆಗೊಳ್ಳುತ್ತದೆ.

31 ಕಿ.ಮೀ ಉದ್ದದ ಮಾರ್ಗದಲ್ಲಿ 27 ನಿಲ್ದಾಣಗಳಿರುತ್ತವೆ. ಇಂಟರ್‍ಚೇಂಜ್ ನಿಲ್ದಾಣಗಳು ಕಜಕೂಟಂ/ಟೆಕ್ನೋಪಾರ್ಕ್/ಕಾರ್ಯವಟ್ಟಂ ಆಗಿರುತ್ತವೆ.

ತಿರುವನಂತಪುರಂ ಮೆಟ್ರೋದ ಸಿದ್ಧತೆಗಳ ಭಾಗವಾಗಿ, ಶ್ರೀಕಾರ್ಯಂ, ಉಳ್ಳೂರು ಮತ್ತು ಪಟ್ಟಂ ಫ್ಲೈಓವರ್‍ಗಳ ನಿರ್ಮಾಣವನ್ನು ಕೊಚ್ಚಿ ಮೆಟ್ರೋ ರೈಲು ಲಿಮಿಟೆಡ್‍ಗೆ ವಹಿಸಲಾಯಿತು.

ಇವುಗಳಲ್ಲಿ, ಶ್ರೀಕಾರ್ಯಂ ಫ್ಲೈಓವರ್ ನಿರ್ಮಾಣವು ವೇಗವಾಗಿ ಪ್ರಗತಿಯಲ್ಲಿದೆ. ಮೆಟ್ರೋ ರೈಲು ಯೋಜನೆಯು ವೇಗವಾಗಿ ಬೆಳೆಯುತ್ತಿರುವ ತಿರುವನಂತಪುರಂ ನಗರದ ಭವಿಷ್ಯದ ಅಭಿವೃದ್ಧಿಯನ್ನು ವೇಗಗೊಳಿಸಲಿದೆ. ಆದರೆ ಇವೆಲ್ಲವಕ್ಕೂ ಕೇಂದ್ರದ ಅನುಮತಿ ಬೇಕಾಗುತ್ತದೆ. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries