ಬದಿಯಡ್ಕ: ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ಪೆರ್ಲ ಸನಿಹದ ಕುರಡ್ಕ ಪ್ರದೇಶದಿಂದ ಕಿರಣ್(33)ಎಂಬವರು ನಾಪತ್ತೆಯಾಗಿರುವ ಬಗ್ಗೆ ಪೊಲಿಸರು ಕೇಸು ದಾಖಲಿಸಿಕೊಂಡಿದ್ದಾರೆ. ಎರಡು ದಿವಸಗಳ ಹಿಂದೆ ಮನೆಯಿಂದ ಹೊರಟವರು ವಾಪಸಾಗಿಲ್ಲ ಎಂದು ಮನೆಯವರು ನೀಡಿದ ದೂರಿನನ್ವಯ ಈ ಕೇಸು ದಾಖಲಾಗಿದೆ. ಕಿರಣ್ ಶ್ರವಣದೋಷ ಹಾಗೂ ಮಾತುಬಾರದ ಸ್ಥಿತಿಯಲ್ಲಿದ್ದು,ಮನೆಯಿಂದ ಹೊರಡುವ ಸಂದರ್ಭ ಜೀನ್ಸ್ ಪ್ಯಾಂಟ್ ಮತ್ತು ಅಂಗಿ ಧರಿಸಿದ್ದು, ಇವರ ಬಗ್ಗೆ ಮಾಹಿತಿ ಲಭಿಸಿದವರು ಬದಿಯಡ್ಕಪೊಲೀಸ್ ಠಾಣೆಗೆ(9497947260, 9497980914) ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.





