ಬದಿಯಡ್ಕ: ಎಡನೀರು ಶ್ರೀಮಠದ ಪರಮಪೂಜ್ಯ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ದಿವ್ಯಸಾನಿಧ್ಯ ಹಾಗೂ ನೇತೃತ್ವದಲ್ಲಿ 2026 ಫೆಬ್ರವರಿ 12 ರಿಂದ 16 ರವರೆಗೆ ಶ್ರೀ ವಿಷ್ಣುಮಂಗಲ ಕ್ಷೇತ್ರ ಎಡನೀರಿನಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವವು ವಿವಿಧ ತಾಂತ್ರಿಕ, ವೈದಿಕ, ಸಾಂಸ್ಕøತಿಕ, ಕಾರ್ಯಕ್ರಮಗಳೊಂದಿಗೆ ಜರಗಲಿರುವುದು.
ಉತ್ಸವದ ಯಶಸ್ವಿಗಾಗಿ ಊರ ಪರವೂರ ಶ್ರೀ ಕ್ಷೇತ್ರದ ಭಕ್ತಾದಿಗಳ ಮಹಾಸಭೆ ಜ. 11ರಂದು ಬೆಳಗ್ಗೆ 10ಕ್ಕೆ ಎಡನೀರು ಶ್ರೀಮಠದಲ್ಲಿ ಜರಗಲಿರುವುದಾಗಿ ಪ್ರಕಟಣೆ ತಿಳಿಸಿದೆ.

