HEALTH TIPS

ಕೇರಳ ಸಹಕಾರಿ ಸೇವಾ ಪಿಂಚಣಿದಾರರ ಸಂಘಟ£5 ಉತ್ತರ ವಲಯ ಜಾಥಾ ಯಶಸ್ವಿಗೆ ತೀರ್ಮಾನ

ಕಾಸರಗೋಡು: ವಿವಿಧ ಬೇಡಿಕೆ ಮುಂದಿರಿಸಿ ಕೇರಳ ಸಹಕಾರಿ ಸೇವಾ ಪಿಂಚಣಿದಾರರ ಸಂಘಟನೆ ವತಿಯಿಂದ ಜ. 29ರಂದು ಮಂಜೇಶ್ವರದ ಹೊಸಂಗಡಿಯಿಂದ ಉತ್ತರ ವಲಯ ಜಾಥಾ ಆರಂಭಗೊಳ್ಳಲಿದೆ.  ಸ್ಥಗಿತಗೊಳಿಸಲಾಗಿರುವ ಕ್ಷಾಮಭತ್ತೆ ಪುನಃಸ್ಥಾಪಿಸುವುದು, ಪಿಂಚಣಿ ಸುಧಾರಣೆಗಳನ್ನು ಜಾರಿಗೆ ತರುವುದು, ಕನಿಷ್ಠ ಮತ್ತು ಗರಿಷ್ಠ ಪಿಂಚಣಿ ಮೊತ್ತದ ಹೆಚ್ಚಳ, ವೈದ್ಯಕೀಯ ಭತ್ಯೆ ಹೆಚ್ಚಳಗೊಳಿಸುವುದು ಮುಂತಾದ ಬೇಡಿಕೆ ಮುಂದಿರಿಸಿ ಜಾಥಾ ನಡೆಯಲಿದೆ. ನಂತರ ತಿರುವನಂತಪುರದ ಸೆಕ್ರೆಟೇರಿಯೆಟ್ ಎದುರು ಸರಣಿ ಸತ್ಯಾಗ್ರಹ, ನಿರಾಹಾರ ಸತ್ಯಾಗ್ರಹದ ಯಶಸ್ಸಿಗಾಗಿ ಮಂಜೇಶ್ವರ ಹೊಸಂಗಡಿಯಲ್ಲಿ ಸ್ವಾಗತಸಮಿತಿ ರಚನಾ ಸಮಾವೇಶ ನಡೆಯಿತು.

ಸಮಾವೇಶವನ್ನು ಸಂಘಟನೆ ರಾಜ್ಯ ಸಮಿತಿ ಕಾರ್ಯದರ್ಶಿ ವಿ ಮುಕುಂದನ್ ಉದ್ಘಾಟಿಸಿದರು. ಜಿಲ್ಲಾಕಾರ್ಯದರ್ಶಿ ಎಂ. ವಿಜಯನ್, ತಾಲೂಕು ಸಮಿತಿ ಅಧ್ಯಕ್ಷ ಕೃಷ್ಣನ್ ಅಡ್ಕತ್ತೊಟ್ಟಿ,  ಕಾರ್ಯದರ್ಶಿ ಎಸ್. ರಾಮಚಂದ್ರನ್ ಉಪಸ್ಥಿತರಿದ್ದರು. ಪ್ರಚಾರ ಮೆರವಣಿಗೆ ಮತ್ತು ಇತರ ಕಾರ್ಯಕ್ರಮಗಳುಇದನ್ನು ಯಶಸ್ವಿಗೊಳಿಸಲು, ಕೆ.ಆರ್. ಜಯನಂದನ್ ಅಧ್ಯಕ್ಷರಾಗಿ ಮತ್ತು ಕೃಷ್ಣನ್ ಅಡ್ಕತ್ತೊಟ್ಟಿ ಸಂಚಾಲಕರಾಗಿರುವ 51ಮಂದಿ ಸದಸ್ಯರನ್ನೊಳಗೊಂಡ ಸ್ವಾಗತಸಮಿತಿ ರಚಿಸಲಾಯಿತು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries