HEALTH TIPS

ಮಧ್ಯಪ್ರಾಚ್ಯ ದೇಶಗಳ ಸವಾಲು | ಶಾಂತಿ ಬಯಸುವವರಿಗೆ ನಮ್ಮ ಬೆಂಬಲ: ಜೈಶಂಕರ್‌

ನವದೆಹಲಿ: 'ಮಧ್ಯಪ್ರಾಚ್ಯ ದೇಶಗಳು ಬಹುಸ್ತರದ ಸವಾಲುಗಳನ್ನು ಎದುರಿಸುತ್ತಿವೆ. ಸ್ಥಿರತೆ, ಶಾಂತಿ ಮತ್ತು ಸಮೃದ್ಧಿಯನ್ನು ಬೆಂಬಲಿಸುವವರಿಗೆ ನಮ್ಮ ಬೆಂಬಲ. ಗಾಜಾದಲ್ಲಿ ಯುದ್ಧ ನಿಲ್ಲಿಸುವುದೇ ನಮ್ಮೆಲ್ಲರ ಒಮ್ಮತದ ಆದ್ಯತೆ' ಎಂದು ಭಾರತದ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಶನಿವಾರ ಅಭಿಪ್ರಾಯಪಟ್ಟರು.

ಭಾರತ-ಅರಬ್‌ ದೇಶಗಳ ವಿದೇಶಾಂಗ ಸಚಿವರ ಎರಡನೇ ಸಭೆಯಲ್ಲಿ ಅವರು ಮಾತನಾಡಿದರು. ಈ ಬಾರಿಯ ಸಭೆಯನ್ನು ಭಾರತವು ಆಯೋಜಿಸಿದೆ.

'ವಿವಿಧ ಕಾರಣಗಳಿಂದ ವಿಶ್ವವು ರೂಪಾಂತರಗೊಳ್ಳುತ್ತಿರುವ ಈ ಕಾಲಘಟ್ಟದಲ್ಲಿ ನಾವು ಇಲ್ಲಿ ಸಭೆ ಸೇರಿದ್ದೇವೆ. ಮಧ್ಯಪ್ರಾಚ್ಯ ಮತ್ತು ಪಶ್ಚಿಮ ಏಷ್ಯಾ ಪ್ರದೇಶಗಳಲ್ಲಿ ಕಳೆದ ವರ್ಷ ತೀವ್ರ ಬದಲಾವಣೆಗಳಾಗಿವೆ. ಇವೆಲ್ಲವೂ ನಮ್ಮೆಲ್ಲರ ಮೇಲೆಯೂ ಪರಿಣಾಮ ಬೀರುತ್ತವೆ. ಅರಬ್‌ ದೇಶಗಳು ಮತ್ತು ಭಾರತದ ಸಂಬಂಧದ ಮೇಲೆಯೂ ತುಸು ಪರಿಣಾಮ ಬೀರುತ್ತವೆ' ಎಂದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries