ತಿರುವನಂತಪುರಂ: ಸಬ್ಸಿಡಿ ಸರಕುಗಳ ದಾಸ್ತಾನು ಖಚಿತಪಡಿಸಿಕೊಳ್ಳದ ಸಪ್ಲೈಕೋ ನೌಕರರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಪರಕ್ಕಾಡು, ಮಾವೆಲಿಕ್ಕರ ಮತ್ತು ನೆಯ್ಯಾಟ್ಟಿಂಗರ ಡಿಪೋಗಳಲ್ಲಿನ ಮಾವೇಲಿ ಕಸ್ಟೋಡಿಯನ್ ಹುದ್ದೆಗಳಲ್ಲಿನ ನೌಕರರನ್ನು ಸಪ್ಲೈಕೋ ಅಮಾನತುಗೊಳಿಸಿದೆ.
ಜನವರಿಯಲ್ಲಿ, ಫೆಬ್ರವರಿ ತಿಂಗಳಿಗೆ ಸಬ್ಸಿಡಿ ಸರಕುಗಳ ಅಗತ್ಯತೆಯ ಬಗ್ಗೆ ತಿಳಿಸಲು ಕೇಂದ್ರ ಕಚೇರಿ ಡಿಪೆÇೀಗಳನ್ನು ಕೇಳಿತ್ತು.ಪರಕ್ಕಾಡು, ಮಾವೆಲಿಕ್ಕರ ಮತ್ತು ನೆಯ್ಯಾಟಿಂಗರ ಡಿಪೋಗಳಲ್ಲಿನ ಮಾವೇಲಿ ಕಸ್ಟೋಡಿಯನ್ ಹುದ್ದೆಗಳಲ್ಲಿನ ನೌಕರರು ಸಬ್ಸಿಡಿ ಸರಕುಗಳ ಅಗತ್ಯವಿಲ್ಲ ಎಂದು ತಿಳಿಸಿದ್ದರು.
ಆದಾಗ್ಯೂ, ಫೆಬ್ರವರಿಯಲ್ಲಿ ಮೇಲಿನ ಡಿಪೆÇೀಗಳಲ್ಲಿ ದಾಸ್ತಾನು ಖಾಲಿಯಾಗಿ ಸಾರ್ವಜನಿಕರಿಗೆ ಸರಕುಗಳನ್ನು ವಿತರಿಸಲು ಸಾಧ್ಯವಾಗದಿದ್ದಾಗ, ಕರ್ತವ್ಯಲೋಪ ಎಸಗಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಯಿತು.
ಪರಕ್ಕಾಡು ಮತ್ತು ನೆಯ್ಯಾಟಿಂಗರ ಡಿಪೋಗಳಲ್ಲಿ ಕಡಲೆ, ಕೊತ್ತಂಬರಿ ಮತ್ತು ಮೆಣಸು ಸೇರಿದಂತೆ 5 ಸಬ್ಸಿಡಿ ವಸ್ತುಗಳು ಮತ್ತು ಮಾವೇಲಿಕ್ಕಾರ ಡಿಪೆÇೀದಲ್ಲಿ 8 ವಸ್ತುಗಳು ದಾಸ್ತಾನು ಖಾಲಿಯಾಗಿದ್ದವು.
ಮಾವೇಲಿಕಕ್ಕರ ಡಿಪೆÇೀದ ಹಿರಿಯ ಸಹಾಯಕ ಆರ್. ಪ್ರೇಮನಾಥ್, ನೆಯ್ಯಾಟ್ಟಿಂಗರ ಡಿಪೆÇೀದ ಕಿರಿಯ ಸಹಾಯಕ ವಿಷ್ಣು ವಿ. ದೇವ್ ಮತ್ತು ಪರಕ್ಕಾಡು ಡಿಪೆÇೀದ ಹಿರಿಯ ಸಹಾಯಕ ಎ. ಸನಿತಾಕುಮಾರಿ ಅವರನ್ನು ಬೇಜವಾಬ್ದಾರಿ ಕರ್ತವ್ಯ ಲೋಪಕ್ಕಾಗಿ ಸಪ್ಲೈಕೊ ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕರು (ಸಿಬ್ಬಂದಿ ಮತ್ತು ಆಡಳಿತ) ಹೊರಡಿಸಿದ ಆದೇಶದ ಪ್ರಕಾರ ಅಮಾನತುಗೊಳಿಸಲಾಯಿತು.

