ಕೊಚ್ಚಿ: ಕೇರಳದಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳ ಚುನಾಯಿತ ಸದಸ್ಯರು ನಿಯಮಗಳನ್ನು ಉಲ್ಲಂಘಿಸಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ ಎಂಬ ದೂರಿನ ಕುರಿತು ತಕ್ಷಣ ನಿರ್ಧಾರ ತೆಗೆದುಕೊಳ್ಳುವಂತೆ ಕೇರಳ ಹೈಕೋರ್ಟ್ ರಾಜ್ಯ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದೆ.
ಪ್ರಮಾಣ ವಚನದ ಪದಗಳನ್ನು ಬದಲಾಯಿಸುವುದು ಅಥವಾ ರಾಜಕೀಯ ನಾಯಕರು ಅಥವಾ ರಕ್ತ ಸಾಕ್ಷಿಗಳ ಹೆಸರುಗಳನ್ನು ಸೇರಿಸುವುದು ನಿಯಮಗಳ ಉಲ್ಲಂಘನೆಯಾಗಿದೆ ಎಂದು ನ್ಯಾಯಾಲಯ ಗಮನಿಸಿದೆ.
ಕೇರಳ ಪಂಚಾಯತ್ ರಾಜ್ ಕಾಯ್ದೆ ಮತ್ತು ನಗರಸಭೆ ಕಾಯ್ದೆಯಡಿಯಲ್ಲಿ ನಿಗದಿಪಡಿಸಲಾದ ಪ್ರಮಾಣ ವಚನ ಸ್ವೀಕಾರ ಮಾದರಿಯಲ್ಲಿ ಯಾವುದೇ ನಿರಂಕುಶ ಬದಲಾವಣೆಗಳು ಅಥವಾ ಸೇರ್ಪಡೆಗಳನ್ನು ಮಾಡುವ ಹಕ್ಕು ಯಾರಿಗೂ ಇಲ್ಲ.ದೂರುಗಳನ್ನು ನೇರವಾಗಿ ನಿರ್ಧರಿಸುವ ಬದಲು, ನ್ಯಾಯಾಲಯವು ಈ ವಿಷಯವನ್ನು ಪರಿಶೀಲಿಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶಿಸಿತು.ಎಲ್ಲಾ ಪಕ್ಷಗಳಿಗೆ ತಮ್ಮ ಕಡೆಯಿಂದ ವಿವರಿಸಲು ಅವಕಾಶ ನೀಡಬೇಕು.ನಾಲ್ಕು ವಾರಗಳಲ್ಲಿ ದೂರುಗಳ ಬಗ್ಗೆ ಸ್ಪಷ್ಟ ನಿರ್ಧಾರವನ್ನು ಹೊರಡಿಸುವಂತೆ ನ್ಯಾಯಾಲಯವು ಆಯೋಗಕ್ಕೆ ಸೂಚಿಸಿದೆ.
ತಿರುವನಂತಪುರಂ ಕಾಪೆರ್Çರೇಷನ್ ಸೇರಿದಂತೆ ವಿವಿಧ ಸ್ಥಳೀಯಾಡಳಿತ ಸಂಸ್ಥೆಗಳ ಸದಸ್ಯರು ಅಧಿಕೃತ ಹೇಳಿಕೆಗಳ ಬದಲಿಗೆ ದೇವರುಗಳ ಹೆಸರಿನಲ್ಲಿ ಅಥವಾ ರಾಜಕೀಯ ಹೇಳಿಕೆಗಳಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದರ ವಿರುದ್ಧ ಅರ್ಜಿ ಸಲ್ಲಿಸಲಾಗಿತ್ತು.
ಹಿಂದಿನ ತೀರ್ಪುಗಳನ್ನು ಉಲ್ಲೇಖಿಸಿ, ನಿರ್ದಿಷ್ಟ ಸ್ವರೂಪವನ್ನು ಅನುಸರಿಸದೆ ಪ್ರಮಾಣ ವಚನ ಸ್ವೀಕರಿಸುವವರು ಸದಸ್ಯರಾಗಿ ಮುಂದುವರಿಯಲು ಅಥವಾ ಮತ ಚಲಾಯಿಸಲು ಅರ್ಹರಲ್ಲ ಎಂದು ನ್ಯಾಯಾಲಯವು ಗಮನಸೆಳೆದಿದೆ.

