ಕುಂಬಳೆ: ಮುಜುಂಗಾವು ಕನ್ನಿಮೂಲೆ ಶ್ರೀ ಕೊರಗಜ್ಜ ಮತ್ತು ಕಲ್ಲುರ್ಟಿ ದೈವಸ್ಥಾನದಲ್ಲಿ ವಾರ್ಷಿಕೋತ್ಸವ ಮತ್ತು ಸಾರ್ವಜನಿಕ ಸತ್ಯನಾರಾಯಣ ಪೂಜೆ ಪ್ರಯುಕ್ತ ಮಾ.14 ರಂದು ಶನಿವಾರ ಅಪರಾಹ್ನ 1.30 ರಿಂದ ಉದಯಶಂಕರ ಭಟ್ ಮಜಲು ಮತ್ತು ಬಳಗದವರಿಂದ ಮಹಾಕಲಿ ಮಗಧೇಂದ್ರ ಎಂಬ ತುಳು ಯಕ್ಷಗಾನ ತಾಳಮದ್ದಳೆ ಜರಗಲಿದೆ. ವಿಶ್ವನಾಥ ಮುಜುಂಗಾವು ಅವರು ಕಾರ್ಯಕ್ರಮವನ್ನು ಪ್ರಾಯೋಜಿಸಲಿದ್ದಾರೆ. ಕಲಾಭಿಮಾನಿ ಭಗವದ್ಭಕ್ತರು ಸಹಕರಿಸಬೇಕೆಂದು ಸಂಘಟಕರು ವಿನಂತಿಸಿದ್ದಾರೆ.

