ಬದಿಯಡ್ಕ: ಭಗವಾನ್ ಶ್ರೀ ಸತ್ಯಸಾಯಿಬಾಬಾ ಜನ್ಮ ಶತಮಾನೋತ್ಸವದ ಅಂಗವಾಗಿ ದೇಶವ್ಯಾಪಿ ವಿವಿಧ ಆರಾಧನಾ ಮಂದಿರಗಳು, ದೇಗುಲಗಳಿಗೆ ಸಂಚರಿಸುವ ಶ್ರೀ ಸತ್ಯಸಾಯಿ ಪ್ರೇಮವಾಹಿನಿ ರಥಯಾತ್ರೆ ಬಡವರ ಪಾಲಿನ ಬಂಧು, ಕೊಡುಗೈದಾನಿ ಕಿಳಿಂಗಾರು ದಿ. ಸಾಯಿರಾಂ ಭಟ್ ಅವರ ಸಾಯಿಮಂದಿರಕ್ಕೆ ಬುಧವಾರ ಬೆಳಗ್ಗೆ ಆಗಮಿಸಿತು.
ಸಾಯಿರಾಂ ಕೆ.ಎನ್.ಕೃಷ್ಣ ಭಟ್-ಶೀಲಾ ದಂಪತಿಗಳು ಶ್ರೀಪಾದುಕೆಗಳನ್ನು ಸ್ವೀಕರಿಸಿ ಬರಮಾಡಿಕೊಂಡರು. ಸಾಯಿರಾಂ ಭಕ್ತರು ಸತ್ಸಂಗ, ಭಜನೆ ನಡೆಸಿಕೊಟ್ಟರು. ಸೇರಿದ ಭಕ್ತರು ಶ್ರೀ ಸ್ವಾಮಿಯ ಪಾದುಕೆ ದರ್ಶನ ಮಾಡಿ ಪ್ರಸಾದ ಸ್ವೀಕರಿಸಿದರು.

.jpg)
.jpg)
.jpg)
