ಕಾಸರಗೋಡು: ಮೊಗ್ರಾಲ್ ಪುತ್ತೂರಿನ ನದಿಗೆ ಹಾರಿ ಆತ್ಮಹತ್ಯೆಗೈದ ಶಿಕ್ಷಕ ಮತ್ತು ಬೂತ್ ಹೆಡ್ ಆಫೀಸರ್ ಬಿ. ಮುಹಮ್ಮದ್ ಸವದ್ ಅವರ ಮೃತದೇಹಕ್ಕೆ ಜಿಲ್ಲಾಧಿಕಾರಿ ಅರ್ಜುನ್ ಪಾಂಡಿಯನ್ ಅವರು ಮೊಗ್ರಾಲ್ ಪುತ್ತೂರಿನ ಅವರ ಮನೆಯಲ್ಲಿ ಅಂತಿಮ ನಮನ ಸಲ್ಲಿಸಿದರು. ಜಿಲ್ಲಾಧಿಕಾರಿ ಕುಟುಂಬ ಸದಸ್ಯರಿಗೆ ಸಂತಾಪ ಸೂಚಿಸಿದರು.
ಪೋಲೀಸರು ವಿವರವಾದ ತನಿಖೆ ನಡೆಸಿ ಸವದ್ ಅವರ ಕುಟುಂಬಕ್ಕೆ ಅರ್ಹವಾದ ಎಲ್ಲಾ ಸವಲತ್ತುಗಳು ಸಿಗುವಂತೆ ನೋಡಿಕೊಳ್ಳಲು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದರು.
ಕಾಸರಗೋಡು ಆರ್ಡಿ ಒ ಬಿನು ಜೋಸೆಫ್, ತಹಸೀಲ್ದಾರ್ ಶೆರಿಲ್ ಬಾಬು ಮತ್ತು ಗ್ರಾಮ ಅಧಿಕಾರಿ ಜಯಪ್ರಕಾಶ್ ಕಲೆಕ್ಟರ್ ಜೊತೆಗಿದ್ದರು.



