ಕಾಸರಗೋಡು: ನಗರದ ತೆರುವತ್ ಶ್ರೀ ಚೀರುಂಬಾ ಭಗವತೀ ಕ್ಷೇತ್ರದಲ್ಲಿ ಶ್ರೀ ಚೀರುಂಬಾ ಭಗವತೀ ಹಾಗೂ ಪರಿವಾರ ದೇವತೆಗಳಿಗೆ ಬ್ರಹ್ಮಕಲಶೋತ್ಸವ ಶುಕ್ರವರ ನೆರವೇರಿತು. ಬ್ರಹ್ಮಶ್ರೀ ವಿಷ್ಣುಪ್ರಕಾಶ ತಂತ್ರಿ ಕಾವುಮಠ ಅವರ ನೇತೃತ್ವದಲ್ಲಿ ಕಾರ್ಯಕ್ರಮ ಜರುಗಿತು. ಈ ಸಂದರ್ಭ ಗಣಹೋಮ, ಶ್ರೀದೇವರ ನೃತ್ಯ ಬಲಿ ಉತ್ಸವ, ಶ್ರೀ ಲಲಿತಾಸಹಸ್ರನಾಮಾವಳಿ, ಭಂಡಾರ ಮೆರವಣಿಗೆ ನೆರವೇರಿತು.
ಶನಿವಾರ ಬೆಳಗ್ಗೆ ಶ್ರೀದೇವರ ಬಲಿ ಉತ್ಸವ, ಶ್ರೀವಿಷ್ಣುಮೂರ್ತಿ ದೈವದ ಕುಳಿಚ್ಚಾಟ, ಎಣಙËಚಾರ ಮತ್ತುಚಪ್ಪರ ಮದುವೆ, ಪಿಲಿಚಾಮುಂಡಿ ದೈವದ ಕೋಲ, ಬಬ್ಬರಿಯ ದೈವದ ಕೋಲ, ಶ್ರೀದೇವರ ನೃತ್ಯ ಬಲಿ ಉತ್ಸವ, ಶ್ರೀ ವಿಷ್ಣುಮೂರ್ತಿ ದೈವದ ಕೋಲ, ಗುಳಿಗ ದೈವದ ಕೋಲ ನಡೆಯಿತು.
ಮಾ.1ರಂದು ಬೆಳಗ್ಗೆ 9.30ಕ್ಕೆ ನಾಗತಂಬಿಲ, 10ಕ್ಕೆ ಬ್ರಹ್ಮರಕ್ಷಕಗೆ ವಿಶೇಷ ಪೂಜೆ, ಮಧ್ಯಾಹ್ನ 2ಗಂಟೆಗೆ ಗುಳಿಗ ಕೋಲ, ರಾತ್ರಿ 8ಕ್ಕೆ ಬಬ್ಬರ್ಯ ದೈವಕ್ಕೆ ಅಡ ನೈವೇದ್ಯ ನಡೆಯುವುದು.



