ಕುಂಬಳೆ: ಕಾನ ಶ್ರೀಶಂಕರನಾರಾಯಣ ಮಠದ ವಾರ್ಷಿಕ ಪ್ರತಿಷ್ಠಾ ಉತ್ಸವ ಇಂದು(ಏ.23) ಕ್ಷೇತ್ರಾಚಾರ್ಯ ಗುಣಾಜೆ ಈಶ್ವರ ಭಟ್ ಅವರ ನೇತೃತ್ವದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 8ಕ್ಕೆ ಕಲಶ ಪ್ರತಿಷ್ಠೆ, 9ಕ್ಕೆ ಪೂಜಾ ಸಂಕಲ್ಪ, 9.30ಕ್ಕೆ ಶತರುದ್ರಾಭಿಷೇಕ, 12ಕ್ಕೆ ಶ್ರೀಶಂಕರನಾರಾಯಣ ದೇವರಿಗೆ ಮಹಾಮಂಗಳಾರತಿ, ಪ್ರಸಾದ ವಿತರಣೆ, 1ಕ್ಕೆ ದೇವಕಾರ್ಯ ಸಂತರ್ಪಣೆ, 1.30ಕ್ಕೆ ಮಂತ್ರಾಕ್ಷತೆ ಹಾಗೂ ಸಂಜೆ 5ಕ್ಕೆ ಶ್ರೀಧೂಮಾವತಿಗೆ ತಂಬಿಲ ಸೇವೆ ನಡೆಯಲಿದೆ. ರುದ್ರಪಾರಾಯಣ ನಡೆಸುವ ಆಸಕ್ತರು ಬೆಳಿಗ್ಗೆ 9.30ಕ್ಕೆ ಉಪಸ್ಥಿತರಿರಬೇಕು ಎಮದು ಚಾಲ್ತಿ ವರ್ಷದ ಆಡಳ್ತೆದಾರ ಡಾ.ಶಾಮಪ್ರಸಾದ ಬೋನಂತಾಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


