ಕುಂಬಳೆ: ಕುಂಬಳೆ ಉಳುವಾರ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅನೇಕ ದತ್ತಿ ಚಟುವಟಿಕೆಗಳನ್ನು ಮುನ್ನಡೆಸುತ್ತಿರುವ ಅಮಿಗೋಸ್ ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್ ಉಳುವಾರ್ ಆಯೋಜಿಸಿರುವ ಅಖಿಲ ಭಾರತ ಮಟ್ಟದ ಕ್ರಿಕೆಟ್ ಪಂದ್ಯಾವಳಿ ಸೋಮವಾರ, ಮಂಗಳವಾರ ಮತ್ತು ಬುಧವಾರ ಉಳುವಾರ್ ಬಾಯಿಕಟ್ಟೆ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಕ್ಲಬ್ ಪದಾಧಿಕಾರಿಗಳು ನಿನ್ನೆ ಕುಂಬಳೆಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ದೇಶದ ವಿವಿಧ ಭಾಗಗಳಿಂದ ತಂಡಗಳು ಮತ್ತು ಆಟಗಾರರು ಭಾಗವಹಿಸಲಿದ್ದಾರೆ. ಪಂದ್ಯಾವಳಿಗಳು ಪ್ರತಿದಿನ ಮಧ್ಯಾಹ್ನ 3 ಗಂಟೆಯಿಂದ ಪ್ರಾರಂಭವಾಗಲಿವೆ. ಜೆಆರ್ ಬ್ರದರ್ಸ್ ಮುಂಬ್ಯೆ, ಗ್ರೀನ್ ಸ್ಟಾರ್ ಪೆಡನ, ಎಸ್ಪಿಯು ನರಸಿಂಹಂ ತ್ರಿಶೂರ್, ಶಾಫ್ಟ್ ಸುಬ್ರಿ ಅವೆನ್ಯೂ, ಚೀತಾ ತೇರುವತ್, ರೆಡ್ ಸ್ಟಾರ್ ಉಪ್ಪಳ, 96 ಬದಿಯಡ್ಕ, ಸ್ಪಾರ್ಟನ್ಸ್, ಅಮಿಗೋಸ್ ಉಳುವಾರ್, ಜಮಾನ್ ಕಲ್ಪಾರ, ಮುಂಬೈ ಕ್ರಿಕೆಟ್ ಮಾಫಿಯಾ, ಗ್ರೀನ್ ಆರ್ಮಿ ವಿದ್ಯಾಗಿರಿ, ಕುಮಟೂರ್ ಇಲೆವೆನ್, ಹಿಮಾಲಯ ಆರ್ಟಿಕಲ್ಸ್, ಟೀಮ್ ಅಲ್-ಫಲಾ, ಡೆಮಾಬ್ಸ್ ಸೇರಿದಂತೆ ದೇಶದ ವಿವಿಧ ಭಾಗಗಳ ಖ್ಯಾತ ತಂಡಗಳು ಭಾಗವಹಿಸಲಿವೆ.
ಕರ್ನಾಟಕ ಸ್ಪೀಕರ್ ಯು.ಟಿ. ಖಾದರ್ ಸೋಮವಾರ ಮಧ್ಯಾಹ್ನ 3 ಗಂಟೆಗೆ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕರಾದ ಎನ್.ಎ.ನೆಲ್ಲಿಕುನ್ನು ಅಡ್ವ. ಸಿ.ಎಚ್. ಕುಂಞಂಬು ಹಾಗೂ ಇತರೆ ಜನಪ್ರತಿನಿಧಿಗಳು, ರಾಜಕೀಯ ಪಕ್ಷಗಳ ಮುಖಂಡರು, ಸಾಮಾಜಿಕ-ಸಾಂಸ್ಕೃತಿಕ ಮುಖಂಡರು ಉಪಸ್ಥಿತರಿರುವರು.
ಯೂಸುಫ್ ಉಳುವಾರ್, ರಹೀಸ್, ಶರೀಫ್, ಅಬ್ದುಲ್ ರಹಮಾನ್, ಆರಿಫ್, ಜಲೀಲ್ ಉಳುವಾರ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದು ಮಾಹಿತಿ ನೀಡಿದರು.

