ಕೊಟ್ಟಾಯಂ: ಶಬರಿಮಲೆ ಅಯ್ಯಪ್ಪ ಸೇವಾ ಸಮಾಜದ 18ನೇ ರಾಜ್ಯ ಸಮ್ಮೇಳನವು 9 ಮತ್ತು 10 ರಂದು ಚೆಂಗನ್ನೂರು ವಂಡಿಮಾಲ ದೇವಸ್ಥಾನಂ ಸಭಾಂಗಣದಲ್ಲಿ ನಡೆಯಲಿದೆ ಎಂದು ಪದಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿರುವರು.
ರಾಜ್ಯ ಪರಿಷತ್ತಿನ ಸಭೆಯನ್ನು ಬೆಳಿಗ್ಗೆ 9 ಗಂಟೆಗೆ ಅಧ್ಯಕ್ಷ ಪಿ.ಎನ್. ನಾರಾಯಣ ವರ್ಮ ಉದ್ಘಾಟಿಸಲಿದ್ದಾರೆ. ಪ್ರತಿನಿಧಿ ಸಮ್ಮೇಳನವನ್ನು 10 ರಂದು ಬೆಳಿಗ್ಗೆ 9.30 ಕ್ಕೆ ಆಧ್ಯಾತ್ಮಿಕ ವಾಗ್ಮಿ ಪೆÇ್ರ. ಸರಿತಾ ಅಯ್ಯರ್ ಉದ್ಘಾಟಿಸಲಿದ್ದಾರೆ. ರಾಷ್ಟ್ರೀಯ ಅಧ್ಯಕ್ಷ ಎಸ್.ಜೆ.ಆರ್. ಕುಮಾರ್ ಮುಖ್ಯ ಭಾಷಣ ಮಾಡಲಿದ್ದಾರೆ ಮತ್ತು ಮಾತಾ ಅಮೃತಾನಂದಮಯಿ ಮಠದ ಸ್ವಾಮಿ ವೇದಾಮೃತಾನಂದಪುರಿ ಅನುಗ್ರಹ ಭಾಷಣ ಮಾಡಲಿದ್ದಾರೆ. ರಾಜ್ಯಾಧ್ಯಕ್ಷ ಪಿ.ಎನ್. ನಾರಾಯಣ ವರ್ಮ ಅಧ್ಯಕ್ಷತೆ ವಹಿಸಲಿದ್ದಾರೆ.
ಮಧ್ಯಾಹ್ನ 3.30 ಕ್ಕೆ ಸಮಾರೋಪ ಸಮ್ಮೇಳನದಲ್ಲಿ ಕುಮ್ಮನಂ ರಾಜಶೇಖರನ್ ಮುಖ್ಯ ಭಾಷಣ ಮಾಡಲಿದ್ದಾರೆ. ಸೀಮಾ ಜಾಗರಣ್ ಮಂಚ್ ರಾಷ್ಟ್ರೀಯ ಸಂಯೋಜಕ ಎ.ಗೋಪಾಲಕೃಷ್ಣನ್, ಅಯ್ಯಪ್ಪ ಸೇವಾ ಸಮಾಜಂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ಕುಮಾರ್ ಭಾಷಣ ಮಾಡಲಿದ್ದಾರೆ.
ಸುಬಿನ್ ವಿ.ಅನಿರುಧನ್, ಅಕ್ಕಿಮೊನ್ ಕಾಳಿದಾಸನ್ ಭಟ್ಟತಿರಿಪಾಡ್, ಕೆ.ಪಿ. ಹರಿದಾಸ್, ವಿ.ಕೆ. ರಾಜಶೇಖರನ್, ತರಣನೆಲ್ಲೂರು ಸತೀಶನ್ ನಂಬೂತಿರಿಪಾಡ್, ಎ.ಆರ್. ಮೋಹನನ್, ಎ.ವಿ. ಶಂಕರನ್, ಲಾಲ್ ಪ್ರಸಾದ್ ಭಟ್ಟತಿರಿ, ಅಡ್. ಜಯನ್ ಚೆರುವಳ್ಳಿ, ಜಯಶ್ರೀ ಸುರೇಶ್ ಮತ್ತಿತರರು ವಿವಿಧ ಸಭೆಗಳಲ್ಲಿ ಭಾಷಣ ಮಾಡಲಿದ್ದಾರೆ. ಸಮ್ಮೇಳನದಲ್ಲಿ ಜಿಲ್ಲೆ ಹಾಗೂ ತಾಲೂಕು ಮಟ್ಟದ 450 ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ರಾಜ್ಯಾಧ್ಯಕ್ಷ ಪಿ.ಎನ್. ನಾರಾಯಣ ವರ್ಮ, ಸ್ವಾಗತ ಕೂಟದ ಪ್ರಧಾನ ಸಂಚಾಲಕ ಅಡ್. ಜಯನ್ ಚೆರುವಳ್ಳಿ, ಕೊಟ್ಟಾಯಂ ಜಿಲ್ಲಾಧ್ಯಕ್ಷ ಅಡ್ವ. ಜಿ.ಶ್ರೀಕುಮಾರ್, ಕಾರ್ಯದರ್ಶಿ ಟಿ.ಸಿ. ವಿಜಯಚಂದ್ರನ್ ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮಗಳನ್ನು ವಿವರಿಸಿದರು.
ನಾಮಜಪ ಮೆರವಣಿಗೆ: ಪ್ರಕರಣಗಳನ್ನು ಹಿಂಪಡೆಯಬೇಕು:
ಕೊಟ್ಟಾಯಂ: ಶಬರಿಮಲೆಗೆ ಮಹಿಳೆಯರ ಪ್ರವೇಶವನ್ನು ವಿರೋಧಿಸಿ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ನಾಮಜಪ ಮೆರವಣಿಗೆಗಳಲ್ಲಿ ಭಾಗವಹಿಸಿದವರ ವಿರುದ್ಧ ದಾಖಲಾಗಿರುವ ಸುಳ್ಳು ಪ್ರಕರಣಗಳನ್ನು ಹಿಂಪಡೆಯಲು ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಹೊಸ ಸರ್ಕಾರ ಸಿದ್ಧರಾಗಿರಬೇಕು ಎಂದು ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ ಒತ್ತಾಯಿಸಿದೆ. ಶಬರಿಮಲೆಯಲ್ಲಿ ನಡೆದ ಚಿನ್ನ ಕಳ್ಳತನದ ತನಿಖೆಯನ್ನು ಸಿಬಿಐಗೆ ವಹಿಸಬೇಕು. ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ ಅಯ್ಯಪ್ಪ ಸೇವಾ ಸಮಾಜಂ ಪದಾಧಿಕಾರಿಗಳು, ಹೊಸ ಸರ್ಕಾರ ಪ್ರಮಾಣವಚನ ಸ್ವೀಕರಿಸಿದ ನಂತರ ಈ ವಿಷಯಗಳನ್ನು ಉಸ್ತುವಾರಿಗಳೊಂದಿಗೆ ಪ್ರಸ್ತಾಪಿಸುವುದಾಗಿ ಹೇಳಿದರು.

