ಕಾಸರಗೋಡು: ಕಾಳ್ಯಂಗಾಡು ಶ್ರೀ ಮೂಕಾಂಬಿಕಾ ದೇವಾಲಯದಲ್ಲಿ ಬ್ರಹ್ಮಕಲಶೋತ್ಸವ ಸಂಪನ್ನಗೊಂಡಿದ್ದು, ಶುಕ್ರವಾರ ಚಂಡಿಕಾ ಹೋಮ ಜರುಗಿತು. ತಂತ್ರಿವರ್ಯ ಶ್ರೀ ಕೃಷ್ಣ ಗುರೂಜಿ ಅವರ ಮಾರ್ಗದರ್ಶನದಲ್ಲಿ ವೈದಿಕರು ಚಂಡಿಕಾ ಹೋಮ ನಡೆಸಿಕೊಟ್ಟರು. ಉದಯಪೂಜೆ, ಶ್ರೀ ದೇವಿಯ ಮಹಾಪೂಜೆ, ನಂತರ ಮಂಗಳಸೇವೆ ಇತ್ಯಾದಿ ಜರುಗಿದುವು. ಇಲ್ಲಿನ ಶ್ರೀ ಸರಸ್ವತಿ ಮಂಟಪದಲ್ಲಿ ವಿವಿಧ ತಂಡಗಳಿಂದ ಭಜನೆ ನಡೆಯಿತು.
ಇಂದು ಕೊರಗಜ್ಜನ ಕೋಲ:
ಕಾಳ್ಯಂಗಾಡು ಶ್ರೀ ಮೂಕಾಂಬಿಕಾ ಕ್ಷೇತ್ರದಲ್ಲಿ ಶ್ರೀಮೂಕಾಂಬಿಕಾ ಕ್ಷೇತ್ರದಲ್ಲಿ ಜೋಡಿ ಕೊರಗಜ್ಜನ ಕೋಲ ಮೇ 2ರಂದು ಜರುಗಲಿದೆ. ಮೇ 2ರಂದು ಸಂಜೆ 5ಕ್ಕೆ ಭಂಡಾರ ಮನೆಯಿಂದ ಭಂಡಾರ ಆಗಮನ, 6ಕ್ಕೆ ಶ್ರೀ ಗುಳಿಗ ದೈವದ ಕೋಲ, ರಾತ್ರಿ 8ಕ್ಕೆ ಶ್ರೀ ಕೊರಗ ತನಿಯ ದೈವದ ಜೋಡಿಕೋಲ ನಡೆಯಲಿರುವುದು.


