ಕಾಸರಗೋಡು: ಬೇಕಲ್ ಗೋಕುಲಂ ಗೋಶಾಲೆಯಲ್ಲಿ ಪರಂಪರಾ ವಿದ್ಯಾಪೀಠದ ಆಶ್ರಯದಲ್ಲಿ ಆಯೋಜಿಸಲಾಗಿರುವ ಮೂರನೇ ರಾಷ್ಟ್ರೀಯ ನೃತ್ಯೋತ್ಸವದಲ್ಲಿ ಬೆಂಗಳೂರಿನ ವೈಷ್ಣವಿ ನಾಟ್ಯಶಾಲೆಯ ಸಂಸ್ಥಾಪಕರು ಮತ್ತು ನಿರ್ದೇಶಕ ನಾಟ್ಯಾಚಾರ್ಯ ಮಿಥುನ್ ಶ್ಯಾಮ್ ಅವರ ಶಿಷ್ಯೆ ಕುಮಾರಿ ಮಾನಶಿಕ ಡಿ. ಅವರ ನೃತ್ಯ ಪ್ರದರ್ಶನ ಜರಗಿತು.
ವೈಷ್ಣವಿ ನಾಟ್ಯಶಾಲೆಯ ಪ್ರಾಮಾಣಿಕ ಮತ್ತು ಉತ್ಸಾಹಿ ವಿದ್ಯಾರ್ಥಿನಿಯಾಗಿರುವ ಮಾನಶಿಕ ಅವರು ಕಳೆದ ಏಳು ವರ್ಷಗಳಿಂದ ಭರತನಾಟ್ಯ ಅಭ್ಯಸಿಸುತ್ತಿದ್ದಾಳೆ. ಕರ್ನಾಟಕ, ತಮಿಳುನಾಡು ಮತ್ತು ಕೇರಳದಾದ್ಯಂತ ಅನೇಕ ದೇವಾಲಯಗಳು, ಸಾಂಸ್ಕøತಿಕ ಕಾರ್ಯಕ್ರಮಗಳು ಮತ್ತು ಸ್ಪರ್ಧಾತ್ಮಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ನೃತ್ಯ ಪ್ರದರ್ಶನಗಳನ್ನು ನೀಡಿದ್ದಾರೆ. ಹೊಸೂರು ನಾಟ್ಯಾಂಜಲಿ ಕಾರ್ಯಕ್ರಮದಲ್ಲಿ "ನಾಟ್ಯಮಣಿ" ಪ್ರಶಸ್ತಿಯನ್ನು ಪಡೆದಿದ್ದಾರೆ. ಸಂಗೀತಕಲಾ ಉತ್ಸವದಲ್ಲಿ ಪ್ರಶಸ್ತಿ ವಿಜೇತೆಯಾಗಿದ್ದು, ಪ್ರತಿಷ್ಠಿತ "ಸಂಗೀತ ಕಲಾ ಚೂಡಾಮಣಿ" ಪ್ರಶಸ್ತಿಯನ್ನು ಸಹ ಪಡೆದುಕೊಂಡಿದ್ದಾರೆ.
ಅವರು 2026ರ ಫೆಬ್ರವರಿಯಲ್ಲಿ ವಿದ್ವಾನ್ ಮಿಥುನ್ ಶ್ಯಾಮ್ ಅವರ ಮಾರ್ಗದರ್ಶನದಲ್ಲಿ ಮತ್ತು ಕುಮಾರಿ ಕಾವ್ಯ ಕಾಶಿನಾಥನ್ ಅವರ ತರಬೇತಿ ಬೆಂಬಲದೊಂದಿಗೆ ತಮ್ಮ ರಂಗಪ್ರವೇಶವನ್ನು (ಅರಂಗೇಟ್ರಂ) ಪೂರ್ಣಗೊಳಿಸುವ ಮೂಲಕ ತಮ್ಮ ಕಲಾತ್ಮಕ ಪಯಣದಲ್ಲಿ ಮಹತ್ವದ ಮೈಲಿಗಲ್ಲನ್ನು ಸಾಧಿಸಿದ್ದಾರೆ. ಗೋಶಾಲೆಯ ಸಂಸ್ಥಾಪಕರು ಹಾಗೂ ಪರಂಪರಾ ವಿದ್ಯಾಪೀಠದ ಆಚಾರ್ಯರಾದ ವಿಷ್ಣು ಹೆಬ್ಬಾರ್ ದಂಪತಿಗಳು ಮಾನಶಿಕಾ ಅವರನ್ನು ಸನ್ಮಾನಿಸಿದರು.



