ಕಾಸರಗೋಡು: ಒಂದೇ ಮನೆಯ ಸಹೋದರರು ಕೇರಳ ಪೆÇಲೀಸ್ ಇಲಾಖೆಯಲ್ಲಿ ಎಸ್ಐ ಆಗಿ ನೇಮಕಗೊಳ್ಳುವುದರ ಜತೆಗೆ ತಮ್ಮ ತರಬೇತಿಯನ್ನು ಏಕ ಕಾಲಕ್ಕೆ ಪೂರೈಸಿ ಸೇವೆಗೆ ಸೇರಲು ಸನ್ನದ್ಧರಾಗಿದ್ದಾರೆ.
ಮಡಿಕೈ ಏಚಿಕ್ಕಾನ ಅಂಚೆ ಕಚೇರಿಯ ಪೆÇೀಸ್ಟ್ಮಾಸ್ಟರ್ ವಿ. ತಂಬಾ£ಜೀವ ವಿಮಾ ನಿಗಮದ ಪ್ರತಿನಿಧಿ ವಿ. ಚಂದ್ರಾವತೀ ದಂಪತಿ ಪುತ್ರರಾದ ಟಿ.ಸಿ ಅಕ್ಷಯ್ ಮತ್ತು ಟಿ.ಸಿ ಅಜಯ್ ಅವರಿಗೆ ಈ ಅಪೂರ್ವ ಅವಕಾಶ ಲಭಿಸಿದೆ. ಇಬ್ಬರೂ 2025ರ ಏಪ್ರಿಲ್ 3ರಂದು ತ್ರಿಶೂರ್ ಪೆÇಲೀಸ್ ಅಕಾಡೆಮಿಯಲ್ಲಿ ತರಬೇತಿಯನ್ನು ಪ್ರಾರಂಭಿಸಿದ್ದರು. 2026ರ ಮೇ 2ರಂದು ತಮ್ಮ ತರಬೇತಿ ಪೂರ್ತಿಗೊಳಿಸಿ ಪಾಸಿಂಗ್ ಔಟ್ ಪೆರೇಡ್ ನಡೆಸಿದ್ದಾರೆ. ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಕ್ಷಯ್ ಅವರನ್ನು ಕಾಸರಗೋಡು ಪೆÇಲೀಸ್ ಉಪವಿಭಾಗಕ್ಕೆ ಮತ್ತು ಅವರ ಸಹೋದರ ಅಜಯ್ ಅವರನ್ನು ಬೇಕಲ್ ವಿಭಾಗಕ್ಕೆ ಚುನಾವಣಾ ಕರ್ತವ್ಯಕ್ಕಾಗಿ ನಿಯೋಜಿಸಲಾಗಿದ್ದು, ಚುನಾವಣಾ ಪ್ರಕ್ರಿಯೆ ಪೂರ್ಣಗೊಂಡ ನಂತರ ಸಹೋದರರು ಸೇವೆಗೆ ಹಾಜರಾಗಲಿದ್ದಾರೆ. ಸಹೋದರರಿಬ್ಬರೂ ಇಂಜಿನಿಯರಿಂಗ್ ಪದವೀಧರರಾಗಿದ್ದಾರೆ.



