ಪುಣೆ: ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ(ಎನ್ಡಿಎ) 150ನೇ ಕೋರ್ಸ್ನ ಘಟಿಕೋತ್ಸವ ಕಾರ್ಯಕ್ರಮವು ಪುಣೆಯಲ್ಲಿ ಶುಕ್ರವಾರ ನಡೆಯಿತು.
ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಿವೃತ್ತ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಅವರು, 'ಕ್ರಿಯಾತ್ಮಕ ಮತ್ತು ಸಂಕೀರ್ಣ ಜಾಗತಿಕ ಭದ್ರತಾ ವ್ಯವಸ್ಥೆಯಲ್ಲಿ ಮುನ್ನಡೆಯುವ ಸಾಮರ್ಥ್ಯವಿರುವ ಜ್ಞಾನವಂತ ಯೋಧರಾಗಿ ಎನ್ಡಿಎ ಕೆಡೆಟ್ಗಳು ರೂಪುಗೊಳ್ಳಬೇಕು' ಎಂದು ಹೇಳಿದರು.
ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಿಂದ(ಜೆಎನ್ಯು) 236 ಮಂದಿ ಪದವಿ ಪಡೆದರು. ಮಿತ್ರ ರಾಷ್ಟ್ರಗಳ 21 ಕೆಡೆಟ್ಗಳಿಗೂ ಪದವಿ ಪ್ರದಾನ ಮಾಡಲಾಯಿತು.
ಕೋರ್ಸ್ ಪೂರ್ಣಗೊಳಿಸಿರುವ 353 ಕೆಡೆಟ್ಗಳ ನಿರ್ಗಮನ ಪಥಸಂಚಲನವು ಶನಿವಾರ ನಡೆಯಲಿದೆ ಎಂದು ಎನ್ಡಿಎ ಪ್ರಕಟಣೆ ತಿಳಿಸಿದೆ.

