ಪೆರ್ಲ: ಸದಸ್ಯರ ಕುಟುಂಬಗಳ ಕಲ್ಯಾಣ ಮತ್ತು ಶೈಕ್ಷಣಿಕ ಪ್ರಗತಿಗೆ ತನ್ನ ಬದ್ಧತೆಯನ್ನು ಪುನರುಚ್ಚರಿಸುತ್ತಾ, ಕ್ಯಾಂಪ್ಕೋ ಲಿಮಿಟೆಡ್, ಮಂಗಳೂರು, ಕ್ಯಾಂಪ್ಕೋ ಕಾಸರಗೋಡು ಜಿಲ್ಲೆಯ ಕಾಞಂಗಾಡ್ ಶಾಖೆಯ ಸದಸ್ಯ ರಾಘವನ್ ಬಿ ಇವರ ತಂದೆ ಕುಞಂಬು ಮಣಿಯಾಣಿ, ವಾಝಕ್ಕುಡನ್ ವೀಡು, ಪುಲ್ಲೂರು, ಹೊಸದುರ್ಗ, ಕಾಸರಗೋಡು ಇವರಿಗೆ ಶಿಕ್ಷಣ ನಿ ಯೋಜನೆಯಡಿ 50,000 ಮೊದಲ ಕಂತನ್ನು ವಿತರಿಸಿತು.
ಎಂ.ಎಸ್ಸಿ ಕೃಷಿ (ಜೆನೆಟಿಕ್ಸ್ ಮತ್ತು ಪ್ಲಾಂಟ್ ಬ್ರೀಡಿಂಗ್) ಮೊದಲ ಸೆಮಿಸ್ಟರ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಉನ್ನತ ಶಿಕ್ಷಣ ಪಡೆಯುತ್ತಿರುವ ಇವರ ಪುತ್ರಿ ಸ್ನೇಹ ಕೆ ಅವರಿಗೆ ಈ ಆರ್ಥಿಕ ನೆರವನ್ನು ಮಂಜೂರು ಮಾಡಲಾಗಿದೆ. ಇತ್ತೀಚೆಗೆ ಪೆರ್ಲ ಇಡಿಯಡ್ಕದಲ್ಲಿ ನಡೆದ ಕ್ಯಾಂಪ್ಕೋ ಸದಸ್ಯರ ಬೆಳೆಗಾರರ ಸಭೆಯಲ್ಲಿ ಕ್ಯಾಂಪ್ಕೋ ಅಧ್ಯಕ್ಷ ಎಸ್. ಆರ್. ಸತೀಶ್ಚಂದ್ರ ಅವರು ಚೆಕ್ ಅನ್ನು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕ್ಯಾಂಪ್ಕೋದ ವಿದ್ಯಾನಿಧಿ ಮತ್ತು ಸಾಂತ್ವನ ಯೋಜನೆಗಳು ಸದಸ್ಯರ ಕಲ್ಯಾಣಕ್ಕೆ ಸಂಸ್ಥೆ ಹೊಂದಿರುವ ದೃಢವಾದ ಬದ್ಧತೆಯನ್ನು ಪ್ರತಿಬಿಂಬಿಸುತ್ತವೆ ಎಂದು ಹೇಳಿದರು. ಸದಸ್ಯರ ಮಕ್ಕಳ ಉನ್ನತ ಶಿಕ್ಷಣಕ್ಕೆ ಬೆಂಬಲ ನೀಡುವುದು ಕ್ಯಾಂಪ್ಕೋದ ಸಾಮಾಜಿಕ ಜವಾಬ್ದಾರಿಯ ಅವಿಭಾಜ್ಯ ಅಂಗವಾಗಿದ್ದು, ಶಿಕ್ಷಣದ ಮೂಲಕ ಕೃಷಿ ಕುಟುಂಬಗಳನ್ನು ಸಬಲೀಕರಣಗೊಳಿಸುವುದು ಸಂಸ್ಥೆಯ ಧ್ಯೇಯವಾಗಿದೆ ಎಂದು ಅವರು ಒತ್ತಿ ಹೇಳಿದರು. ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರು, ನಿರ್ದೇಶಕರು, ವ್ಯವಸ್ಥಾಪಕ ನಿರ್ದೇಶಕರು, ಪ್ರಧಾನ ವ್ಯವಸ್ಥಾಪಕರು, ಮುಖ್ಯ ಮಾರುಕಟ್ಟೆ ಅಧಿಕಾರಿ, ಬದಿಯಡ್ಕ ಪ್ರಾದೇಶಿಕ ವ್ಯವಸ್ಥಾಪಕರು, ಕಾಞಂಗಾಡ್ ಶಾಖಾ ವ್ಯವಸ್ಥಾಪಕರು ಮತ್ತು ಕ್ಯಾಂಪ್ಕೋದ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

.jpg)
.jpg)
