ಕಾಸರಗೋಡು: ಅಧಿಕಾರ ಸ್ವೀಕರಿ ಸಿದ ಬಳಿಕ ಪ್ರಥಮ ಬಾರಿಗೆ ಕಾಸರ ಗೋಡಿಗೆ ತಲುಪಿದ ಸ್ಥಳೀಯಾಡಳಿತ ಇಲಾಖೆ ಸಚಿವ ಕೆ.ಎಂ. ಶಾಜಿಯ ವರನ್ನು ಕಾಸರಗೋಡು ಅತಿಥಿ ಮಂದಿರದಲ್ಲಿ ಕಾಸರಗೋಡು ಚೇಂಬರ್ ಆಫ್ ಕಾಮರ್ಸ್ನ ಆಶ್ರಯದಲ್ಲಿ ಅಭಿನಂದಿಸಲಾಯಿತು. ಈ ವೇಳೆ ಮಾತನಾಡಿದ ಅವರು ಕ್ಷಿಪ್ರ ರೈಲು ಸಾಕಾರಗೊಳ್ಳುವಾಗ ಅದರಲ್ಲಿ ಕಾಸರ ಗೋಡು ಕೂಡಾ ಸೇರಿಕೊಂಡಿರುತ್ತದೆ ಎಂಬುದರಲ್ಲಿ ಯಾವುದೇ ಸಂಶಯ ಬೇಡವೆಂದು ನುಡಿದರು.
ಜಿಲ್ಲೆಯ ಅಭಿವೃದ್ಧಿಗಾಗಿ ಎಲ್ಲಾ ಸ್ತರಗಳಲ್ಲಿರುವ ವ್ಯಕ್ತಿಗಳ ಅಭಿ ಪ್ರಾಯವನ್ನು ಸಂಯೋಜಿಸಿಕೊಂಡು ಯೋಜನೆ ಸಿದ್ಧಪಡಿಸಲಾಗುವು ದೆಂದು ಅವರು ನುಡಿದರು. ಚೇಂಬರ್ ಆಫ್ ಕಾಮರ್ಸ್ನ ಅಧ್ಯಕ್ಷ ಎ.ಕೆ. ಶ್ಯಾಮ್ ಪ್ರಸಾದ್, ಕಾರ್ಯದರ್ಶಿ ಎಂ.ಎನ್. ಪ್ರಸಾದ್, ನಿರ್ದೇಶಕ ಮುಜೀಬ್ ಅಹಮ್ಮದ್ ಭಾಗವಹಿಸಿದರು.

