ಕಾಸರಗೋಡು: ನಗರದ ಮೀಪುಗುರಿ ನವದುರ್ಗಾ ಆಟ್ರ್ಸ್ ಮತ್ತು ಸ್ಪೋಟ್ರ್ಸ್ ಕ್ಲಬ್, ಮಧೂರು ಕುಟುಂಬ ಆರೋಗ್ಯ ಕೇಂದ್ರ, ಕಾಞಂಗಾಡ್ ಮೊಬೈಲ್ ಐ ಚೆಕಪ್ ಆಸ್ಪತ್ರೆ ಜಂಟಿಯಾಗಿ ಮೀಪುಗುರಿ ಅಂಗನವಾಡಿಯಲ್ಲಿ ಕಣ್ಣಿನ ತಪಾಸಣಾ ಶಿಬಿರ, ಜೀವನಶೈಲಿ ರೋಗನಿರ್ಣಯ, ಹಿಮೋಗ್ಲೋಬಿನ್ ಮತ್ತು ರಕ್ತ ಪರೀಕ್ಷೆಯನ್ನು ಆಯೋಜಿಸಲಾಯಿತು.
ಮಧೂರು ಗ್ರಾಪಂ ಸದಸ್ಯ ಗಣೇಶ್ ಮೀಪುಗುರಿ ಶಿಬಿರ ಉದ್ಘಾಟಿಸಿದರು. ಎಫ್ಎಚ್ಸಿ ಆರೋಗ್ಯ ನಿರೀಕ್ಷಕ ಎಂ ಪಿ ಶ್ರೀನಿವಾಸನ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಗೋಪಾಲಕೃಷ್ಣ ಹಾಗೂ ಕ್ಲಬ್ ಸದಸ್ಯ ಹರೀಶ್ ಶೆಟ್ಟಿ ಉಪಸ್ಥಿತರಿದ್ದರು. ಡಾ. ಅಪರ್ಣಾ ನೇತ್ರದಾನದ ಕುರಿತು ಜಾಗೃತಿ ತರಗತಿ ನಡೆಸಿದರು.
ಎಂಎಲ್ಎಸ್ಪಿ ಮಿಲಿನ್ ಜೋಸ್ ಮತ್ತು ಆಶಾ ವರ್ಕ್ ಶ್ರೀವಿದ್ಯಾ ಅಂಗನವಾಡಿ ಶಿಕ್ಷಕಿ ಶ್ರೀಮತಿ ಸ್ಮಿತಾ ಶಿಬಿರದ ನೇತೃತ್ವ ವಹಿಸಿದ್ದರು. ಜೂನಿಯರ್ ಹೆಲ್ತ್ ಇನ್ಸ್ಪೆಕ್ಟರ್ ಜಯಕೃಷ್ಣನ್ ಸ್ವಾಗತಿಸಿದರು. ಆರ್ಡಿ ನಗರ ಉಪ ಕೇಂದ್ರ ಜೆಪಿಎಚ್ ಶ್ರೀಮತಿ ಶಾನಾ ವಂದಿಸಿದರು. ಶಿಬಿರದಲ್ಲಿ ನೂರಕ್ಕೂ ಹೆಚ್ಚು ಮಂದಿ ಶಿಬಿರಾರ್ಥಿಗಳ ತಪಾಸಣೆ ನಡೆಸಲಾಯಿತು. ಅಗತ್ಯವುಳ್ಳ ಶಿಬಿರಾರ್ಥಿಗಳಿಗೆ ಕಣ್ಣಿನ ಪೆÇರೆ ಶಸ್ತ್ರಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಶಿಫಾರಸು ಮಾಡಲಾಯಿತು.

