ಪೆರ್ಲ: ಎಣ್ಮಕಜೆ ಪಂಚಾಯಿತಿ ಹನ್ನೆರಡನೇ ವಾರ್ಡು ಬಜಕೂಡ್ಲು ಪ್ರದೇಶದಲ್ಲಿ ಆರೋಗ್ಯ ಶುಚಿತ್ವ ಕಾರ್ಯಕ್ರಮವನ್ನು ಬಜಕೂಡ್ಲು ಅಂಗನವಾಡಿ ವಠಾರದಲ್ಲಿ ನಡೆಸಲಾಯಿತು. ಮಳೆಗಾಲ ಪೂರ್ವ ಶುಚೀಕರಣ ಕಾರ್ಯದ ಅಂಗವಾಗಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಎಣ್ಮಕಜೆ ಗ್ರಾಮ ಪಂಚಾಯಿತಿ ಸದಸ್ಯ ಕೃಷ್ಣಪ್ಪ ಬಜಕೂಡ್ಲು ಶುಚೀಕರಣ ಕಾರ್ಯಕ್ಕೆ ಚಾಲನೆ ನೀಡಿದರು. ವಾರ್ಡ್ ಜೆಪಿಎಚ್ಎನ್ ಸ್ವಾತಿ, ಅಂಗನವಾಡಿ ಟೀಚರ್ ಶಾರದಾ, ವಾರ್ಡ್ ಆರೋಗ್ಯ ಶುಚಿತ್ವ ಸದಸ್ಯರಾದ ಜನಾರ್ಧನ ಮಾಸ್ಟರ್, ದಯಾನಂದ, ಎಸ್ಟಿ ಪ್ರಮೋಟರ್ ತಿರುಮಲೇಶ್ವರಿ, ಆಶಾ ಕಾರ್ಯಕರ್ತೆ ವಿಜಯ ಕುಮಾರಿ, ಹಸಿರು ಕ್ರಿಯಾ ಸೇನಾ ಸದಸ್ಯೆ ಲಲಿತಾ, ಪ್ರೇಮಲತಾ, ಕುಟುಂಬಶ್ರೀ ಸಿಡಿಎಸ್ ಸದಸ್ಯರಾದ ಮಮತಾ, ಪುಷ್ಪ ಹಾಗೂ ವರ್ಡಿನ ಮತದರರು ಪಲ್ಗೊಂಡಿದ್ದರು.


