HEALTH TIPS

ಆರ್‌ಎಸ್‌ಎಸ್‌ ಬೆಳೆಯಲು ಕಾಂಗ್ರೆಸ್‌ನ ಮೃದು ಧೋರಣೆ ಕಾರಣ: ಅಶೋಕ್‌ ಗೆಹಲೋತ್

 ಜೈಪುರ: 'ಕಾಂಗ್ರೆಸ್‌ನ 'ಮೃದು ಧೋರಣೆ'ಯಿಂದಾಗಿಯೇ ಆರ್‌ಎಸ್‌ಎಸ್‌ ಈ ಮಟ್ಟಕ್ಕೆ ಬೆಳೆದಿದ್ದು, 100 ವರ್ಷ ಪೂರೈಸಿದೆ. ಈ ಕಾರಣಕ್ಕೆ ಅದು ಪಕ್ಷಕ್ಕೆ ಋಣಿಯಾಗಿರಬೇಕು' ಎಂದು ಕಾಂಗ್ರೆಸ್‌ ಮುಖಂಡ ಹಾಗೂ ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್‌ ಗೆಹಲೋತ್‌ ಮಂಗಳವಾರ ಹೇಳಿದ್ದಾರೆ. 


'ಬಿಜೆಪಿ-ಆರ್‌ಎಸ್‌ಎಸ್‌ ಆಡಳಿತದ ಅವಧಿಯಲ್ಲಿ ಭಾರತವು ಹಿಂದೂ ರಾಷ್ಟ್ರವಾಗಿದೆ. ಈ ಕುರಿತು ಔಪಚಾರಿಕ ಘೋಷಣೆಯಷ್ಟೆ ಬಾಕಿ ಇದೆ' ಎಂದು ಅವರು ಹೇಳಿಕೊಂಡಿದ್ದಾರೆ.

ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಈಗ ಬಿಜೆಪಿ ಮಾಡುತ್ತಿರುವಂತೆ ಕಾಂಗ್ರೆಸ್‌ ಪಕ್ಷವು ತನ್ನ ಅಧಿಕಾರದ ಅವಧಿಯಲ್ಲಿ ದ್ವೇಷ ಸಾಧಿಸಿದ್ದರೆ ಆರ್‌ಎಸ್‌ಎಸ್‌ ಅಥವಾ ಬಿಜೆಪಿ ಈ ಮಟ್ಟಿಗೆ ಬೆಳೆಯಲು ಸಾಧ್ಯವಾಗುತ್ತಿರಲಿಲ್ಲ. ಈ ಕಾರಣಕ್ಕೆ ಅವು ಕಾಂಗ್ರೆಸ್‌ಗೆ ಧನ್ಯವಾದ ಹೇಳಬೇಕು' ಎಂದರು.

'ಇತರ ಧರ್ಮಗಳನ್ನು ತುಳಿಯಲಾಗುತ್ತಿದೆ. ಮೊದಲು ಮುಸ್ಲಿಮರು, ಬಳಿಕ ಕ್ರೈಸ್ತರನ್ನು ಗುರಿ ಮಾಡಲಾಯಿತು. ನಂತರ ಇತರರನ್ನು ಗುರಿ ಮಾಡಬಹುದು. ದೇಶದಲ್ಲಿ ಏನಾಗುತ್ತಿದೆ ಎಂಬುದನ್ನು ಜೈನರು ಹಾಗೂ ಪಾರ್ಸಿಗಳು ಅರ್ಥ ಮಾಡಿಕೊಳ್ಳಬೇಕು' ಎಂದು ಆರೋಪಿಸಿದರು. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries